ಮೂಲಭೂತ ಸೌಲಭ್ಯಕ್ಕೆ ಉಳ್ಳವರಿಂದ ಆಗ್ರಹ
 ಮೂಲಭೂತ ಸೌಲಭ್ಯಗಳ ಕೊರತೆ ಸಹಜವಾಗಿ ಕಟ್ಟಕಡೆಯ ಜನಾಂಗ ಅಥವಾ ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶದಲ್ಲಿರುವದು ಸಹಜ ಆದರೆ ಇಲ್ಲೊಂದು ಕಾಲನಿಯಲ್ಲಿ ಅತ್ಯಂತ ಶ್ರೀಮಂತಿಕೆ ಕುಟುಂಬಗಳಿದ್ದರೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆAದರೆ ನಂಬುತ್ತೀರಾ..1? ನಂಬಲೇಬೇಕು.
ಬಾಗಲಕೋಟೆ ಜಿಲ್ಲೆಯ
ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸಾಯಿ ನಗರ ಎಂಬ ಪ್ರದೇಶವು ಕಳೆದೊಂದು ದಶಕದ ಹಿಂದೆ ಉದಯವಾಗಿದೆ. ಇಲ್ಲಿನ ಜನಾಂಗವು ಅತ್ಯಂತ ಮುಂದುವರೆದ ಹಾಗು ಪ್ರತಿಭಾವಂತ ಕುಟುಂಬಗಳಿದ್ದರೂ ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಹಲವಾರು ಸೌಲಭ್ಯಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಮಳೆಗಾಲ ಬಂತೆಂದರೆ ಮನೆ ಮಂದಿಗೆಲ್ಲ ಭಯ. ಎಲ್ಲ ಮನೆಗಳಿಗೂ ನೀರು ನುಗ್ಗುವದಲ್ಲದೆ ಪ್ರತಿ ದಿನವೂ ಚರಂಡಿಯಿಲ್ಲದ ಕಾರಣ ಹಲವಾರು ಕಡೆ ಓಯಾಸಿಸ್‌ನಂತೆ ಮಲೀನ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ, ಇದರಿಂದ ರೋಗರುಜಿನಿಗಳ ಸಂಖ್ಯೆ ಏರುಮುಖವಾಗಿದೆ.
ಕೃಷಿಯೇತರ ಭೂಮಿಗಳಲ್ಲಿ ಸಮಸ್ಯೆ: ರಬಕವಿ-ಬನಹಟ್ಟಿ ಪಟ್ಟಣದಾದ್ಯಂತ ಹೊಸದಾಗಿ ಕಟ್ಟಡಗಳು ಕೃಷಿಯೇತರ ಭೂಮಿಯಲ್ಲಿ ನಿರ್ಮಾಣವಾಗುತ್ತಿವೆ. ಅಂತಹ ಪ್ರದೇಶದಲ್ಲಿ ಅಭಿವೃದ್ಧಿ ಶುಲ್ಕ ಭರಿಸಿಕೊಂಡರೂ ನಗರಸಭೆ ಸಮರ್ಪಕವಾಗಿ ಕಾಮಗಾರಿ ನಡೆಸುತ್ತಿಲ್ಲವೆಂಬ ಕೂಗು ಸ್ಥಳೀಯರದ್ದಾಗಿದೆ.
ಮೂಲಭೂತ ಕಾರ್ಯಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಿದರೆ, ಸಮರ್ಪಕವಾಗಿ ಕೃಷಿಯೇತರ ಭೂಮಿ ಸಂದರ್ಭ ಕಾರ್ಯ ಮಾಡಿಲ್ಲ. ಹಲವಾರು ಶುಲ್ಕಗಳನ್ನು ಪಾವತಿಸಿಲ್ಲ. ಇಂತಹ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಸಾಧ್ಯವಿಲ್ಲವೆಂಬ ಹಾರಿಕೆ ಉತ್ತರ ನೀಡುತ್ತಿರುವದು ಸಹಜವಾಗಿದೆ.
ಇದರಿಂದ ಸಾಲ ಮಾಡಿ ಮನೆ ಕಟ್ಟಿಕೊಂಡು ಮನೆಗೆ ತೆರಳಲು ಸೂಕ್ತ ರಸ್ತೆಗಳಿಲ್ಲದ ಕಾರಣ ಜನಪ್ರತಿನಿಧಿಗಳಿಗೆ ಹಾಗು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರೆ, ಮತ್ತೊಂದೆಡೆ ಅಕ್ರಮವಾಗಿ ಲೇಔಟ್ ಪ್ರದೇಶಗಳು ಸಮರ್ಪಕವಾಗಿರದಿದ್ದರೂ ಅಂಥವುಗಳಿಗೆ ಪ್ಲಾಟ್ ಖರೀದಿಸಲು ಅನುಮತಿಸುವ ಮೂಲಕ ಮನೆ ನಿರ್ಮಾಣಕ್ಕೂ ಪ್ರಾಧಿಕಾರದಿಂದ ಅವಕಾಶ ದೊರೆಯುತ್ತಿದೆ.ಇವೆಲ್ಲದರ ಬಗ್ಗೆ ಸೂಕ್ತ ತನಿಖೆಯಾಗುವ ಮೂಲಕ ಜನತೆಗೆ ಮೂಲಭೂತ ಸೌಲಭ್ಯಗಳು ದೊರಕಬೇಕಿದೆ.ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವದೇ ಪ್ರಯೋಜನವಾಗಿಲ್ಲವೆನ್ನುತ್ತಾರೆ ಸ್ಥಳೀಯ ನಿವಾಸಿ ಬಸವರಾಜ ನುಚ್ಚಿ.
`ಸ್ಥಳೀಯ ಸದಸ್ಯರಿಗೆ ಹಾಗು ತಾಂತ್ರಿಕ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ಮೀನಾಮೇಷ ಮಾಡುತ್ತಿರುವದಕ್ಕೆ ಬೇಸರವಾಗಿದೆ ಎಂಸು ಡಾ. ಧನ್ವಂತರಿ ಚನಾಳ ತಿಳಿಸಿದರು.
`ಈ ಕುರಿತು ಮಾಹಿತಿಯಿದೆ. ಮುಂದಿನ ದಿನಗಳಲ್ಲಿ ನಗರಸಭೆ ಅನುದಾನದಲ್ಲಿ ರಸ್ತೆ ಹಾಗು ಚರಂಡಿ ವ್ಯವಸ್ಥೆಗೆ ಕಾಮಗಾರಿ ನಡೆಸಲಾಗುವದು ಎಂದು  ಪೌರಾಯುಕ್ತ ಅಶೋಕ ಗುಡಿಮನಿ ತಿಳಿಸಿದರು.