ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿಯ ಕೊಣ್ಣೂರ ಆಂಗ್ಲ ಮಾಧ್ಯಮ ಶಾಲೆಯ ಕಮಾರಿ ಖುಷಿ ಶೇಠ್ ೬೧೮ ಅಂಕ ಪಡೆದು ಶೇ.೯೮.೮೮ ಫಲಿತಾಂಶದೊಂದಿಗೆ ರಬಕವಿ-ಬನಹಟ್ಟಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.
ಇಂಗ್ಲೀಷ್-೧೨೦, ಕನ್ನಡ-೯೮, ಹಿಂದಿ-೧೦೦, ಗಣಿತ-೧೦೦, ವಿಜ್ಞಾನ-೧೦೦ ಮತ್ತು ಸಮಾಜ ವಿಜ್ಞಾನ-೧೦೦ ಅಂಕ ಪಡೆದು ವಿಶೇಷತೆ ಮೆರೆದಿದ್ದು, ಇವಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಪ್ರೊ. ಬಿ.ಕೆ. ಕೊಣ್ಣೂರ ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ಸಂದರ್ಭ ಕೊಣ್ಣೂರ ಶಾಲೆ ಶಿಕ್ಚಕ ವೃಂದದಿಂದ ಶೇಠ್ ಅವರನ್ನು ಸನ್ಮಾನಿಸಲಾಯಿತು.
ವರದಿ ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin