ಹಳ್ಳೂರ 23:ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯನ್ನು ಮೂಡಲಗಿ ತಹಸೀಲ್ದಾರ ಕಚೇರಿಯಲ್ಲಿ ಕೋವಿಡ್ ಇರುವದರಿಂದ ಅತೀ ಸರಳವಾಗಿ ಆಚರಣೆಯನ್ನು ಮಾಡಿದರು. ಪ್ರಾರಂಭದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುವಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. 
 ಪ್ರ,ದ,ಸಹಾಯಕ ವಾಯ್ ಎಮ್ ಉದ್ದಪನವರ ಮಾತನಾಡಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಇಂತಹ ಮಾಹಾನ ಮೇಧಾವಿಗಳನ್ನು ಮರಿಯದೆ ಸದಾ ಸ್ಮರಿಸಬೇಕೆಂದು ಹೇಳಿದರು.                                 ಮುರಿಗೆಪ್ಪ ಮಾಲಗಾರ ಸಮಾಜ ಸೇವಕ ಮಾತನಾಡಿ ಸಮಾಜದ ಏಳ್ಗೆಗಾಗಿ ದುಡಿದ ಹಿತ ಚಿಂತಕರು ಕೇವಲ ಒಂದೇ ಜಾತಿ ಸಮುದಾಯಕ್ಕೆ ಸೀಮಿತರಾಗುವದಿಲ್ಲ ಈಡಿ ಮಾನವ ಕುಲಕ್ಕೆ ಸಂಬಂಧಪಟ್ಟಿರುತ್ತಾರೆ. ಸಮಾಜದಲ್ಲಿ ಒಳ್ಳೆ ಸನ್ಮಾರ್ಗ ಹಾಕಿ ಕೊಟ್ಟಿರುತ್ತಾರೆ. ನಿಯಮಗಳನ್ನು ಸದಾ ಜೀವನದಲ್ಲಿ ಅಳವಡಿಸಿಕೊಂಡು ಹೋದರೆ ಒಳ್ಳೆಯದೆಂದು ಹೇಳಿದರು.  
    ಇದೆ ಸಂದರ್ಭದಲ್ಲಿ ಅಕ್ಷಯ ಅವಾಡೆ. ಸಿದ್ದು ಬಿಸ್ವಾಗರ. ವಿಠ್ಠಲ ಮನಗಾಂವಿ. ಎಮ್ ಎಲ್ ಮಾಸ್ತಮರಡಿ.ಎಸ್ ಎಸ್ ಮುದಗಲ. ಶಿವಾನಂದ ಸಾಲಹಳ್ಳಿ. ಮಂಜು ಗುಡಸೆ. ಲಕ್ಷ್ಮಣ ಡಕ್ಕಣ್ಣವರ. ಬಿ ಎಸ್ ಕಾಳಿ. ಕೆ ಎ ನದಾಫ. ಎಸ್ ಎಲ್ ಇರಕರ.ಜಿ ಬಿ ಸೈದಾಪುರ. ಎಸ್ ಬಿ ಸಿದ್ನಾಳ.ರಾಕೇಶ ಡವಳೇಶ್ವರ. ಮಲ್ಲು ಮುಗಳಖೊಡ ಸೇರಿದಂತೆ ಅನೇಕರಿದ್ದರು