ವರದಿ : ವಿಜಯ ವಾಜಂತ್ರಿ
ತೇರದಾಳದ ಪೇಠಭಾಗದ ಹನುಮಾನ ದೇವಸ್ಥಾನ ಹತ್ತಿರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಶ್ರದ್ಧಾಂಜಲಿ ಕಾರ್ಯಕ್ರದಲ್ಲಿ ಮೆಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು.

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ತೇರದಾಳ : ಮೊನ್ನೆ ದಿನ ಛತ್ತಿಸಗಡ ಅರಣ್ಯ ಪ್ರದೇಶದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಹುತ್ಮಾತರಾದ 22ಭಾರತೀಯ ಯೋಧರಿಗೆ ಪಟ್ಟಣದ ಯುವ ಕಾಂಗ್ರೆಸ್‍ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
  ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎಸ್.ಮಾಸ್ತಿ ಹಾಗೂ ನೇಮಣ್ಣ ಸಾವಂತನವರ ಈ ವಿದ್ವಂಸಕ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಮೆಂಬತ್ತಿ ಬೆಳಗಿ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಅಗಲಿದ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಲಾಯಿತು.
  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಅಳಗೊಂಡ, ಪ್ರವೀಣ ನಾಡಗೌಡ, ಸುರೇಶ ಕಬಾಡಗಿ, ಪ್ರಭು ಗಸ್ತಿ, ಆದಿನಾಥ ಸಪ್ತಸಾಗರ, ದಾನಪ್ಪ ಕರೋಲಿ, ಶಿವಾನಂದ ನಡುವಿನಕೇರಿ, ಚಂದು ಬಾಳಿಕಾಯಿ, ಸಂಜು ಹಾಡಕಾರ, ಮಾಶೂಂ ಇನಾಮದಾರ, ಮಲ್ಲಿನಾಥ ಉಳಗೊಂಡ ಸೇರಿದಂತೆ ಇತರರು ಇದ್ದರು.