ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ರೋಗಿಗಳ ಗಂಟಲು ದ್ರವ ಪರೀಕ್ಷೆ ನಡೆಸುತ್ತಿರುವದು.

ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ:ಜನತೆ ನಿರಾಳ
ರಬಕವಿ-ಬನಹಟ್ಟಿ,ಡಿ3:ಕೊರೊನಾದಿಂದ ತತ್ತರಿಸಿ ಹೋಗಿದ್ದ ರಬಕವಿ-ಬನಹಟ್ಟಿ ತಾಲೂಕಿನ ಜನ ಇದೀಗ ಪರಿಸ್ಥಿತಿ ಬಹುತೇಕ ಹತೋಟಿಗೆ ಬಂದಿದೆ.
ಕಳೆದ ಹದಿನೈದು ದಿನಗಳಿಂದ ಪಾಜಿಟಿವ್ ಪ್ರಕರಣಗಳು ಬೆರಳಣಿಕೆಯಷ್ಟು ಮಾತ್ರ ಕಂಡು ಬಂದಿದೆ. ಹೊಸ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡಿದ್ದು ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿರುವದು ತಾಲೂಕಿನ ಜನ ನಿರಾಳವಾಗಿದ್ದಾರೆ.
ಮಾರ್ಚ್‍ದಿಂದ ಇಲ್ಲಿಯವರೆಗೆ ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಜನರನ್ನು ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ಇದೀಗ ಪ್ರತಿ ದಿನ 200 ರೋಗಿಗಳವರೆಗೂ ಪರೀಕ್ಷೆ ಮಾಡಲಾಗುತ್ತಿದೆ. ಪಾಜಿಟಿವ್ ಪ್ರಕರಣಗಳು ಒಂದೆರಡು ಮಾತ್ರ ಇವೆ ಎನ್ನುತ್ತಾರೆ ಸ್ಥಳೀಯ ಮುಖ್ಯ ವೈದ್ಯಾಧಿಕಾರಿ ಡಾ. ಎನ್.ಎಂ. ನದಾಫ್.
`ತೇರದಾಳ ವಿಧಾನಸಭಾ ಕ್ಷೇತ್ರಾದ್ಯಂತ ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿರುದಕ್ಕೆ ಸಂತಸವಾಗಿದೆ. ಸರ್ಕಾರದ ನಿಯಮಗಳನ್ನು ಶೇ.90 ರಷ್ಟು ಪಾಲಿಸುತ್ತಿರುವದಕ್ಕೆ ಧನ್ಯವಾದಗಳು. ಯಾವದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಜನತೆ ಮಾಸ್ಕ್‍ದೊಂದಿಗೆ ಸಾಮಾಜಿಕ ಅಂತರದಿಂದ ನಿತ್ಯ ಉದ್ಯೋಗ ಮಾಡಿ. ಸಂಪೂರ್ಣ ಅಂತ್ಯಗೊಳ್ಳುವವರೆಗೆ ಪ್ರತಿಯೊಬ್ಬರೂ ಪಾಲಿಸಬೇಕು.’---ಸಿದ್ದು ಸವದಿ, ಶಾಸಕರು, ತೇರದಾಳ.
`ಪ್ರತಿ ದಿನ ಇನ್ನೂರಷ್ಟು ರೋಗಿಗಳ ಪರೀಕ್ಷೆ ನಡೆಯುತ್ತಿದೆ. ಸೋಂಕಿತರ ಪ್ರಕರಣಗಳು ತುಂಬಾ ಕಡಿಮೆಯಾಗಿದೆ. ಇದೇ ರೀತಿ ಜನತೆ ಜಾಗೃತಿಯೊಂದಿಗೆ ಕಾರ್ಯನಿರ್ವಹಿಸಿದರೆ ಸಮಾಜ ಸಂಪೂರ್ನ ಕೊರೊನಾ ಮುಕ್ತವಾಗಬಹುದು.’----ಡಾ. ಎನ್.ಎಂ. ನದಾಫ್. ಮುಖ್ಯ ವೈದ್ಯಾಧಿಕಾರಿ, ಸಮುದಾಯ ಆಸ್ಪತ್ರೆ, ರಬಕವಿ-ಬನಹಟ್ಟಿ.