ಬನಹಟ್ಟಿಯಲ್ಲಿ ಕೊರೊನಾ ಯೋಧರನ್ನು ಸನ್ಮಾನಿಸಲಾಯಿತು.
ಕೊರೊನಾ ಯೋಧರಿಗೆ ಸನ್ಮಾನ
ರಬಕವಿ-ಬನಹಟ್ಟಿ,ಡಿ1: ಹೆಮ್ಮಾರಿ ಕೊರೊನಾ ಸೋಂಕಿನ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ, ಕಂದಾಯ, ಪೌರಾಡಳಿತ ಹಾಗು ಪೊಲೀಸ್ ಇಲಾಖೆಯವರಿಗೆ ಶ್ರೀ ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭ ತಹಶೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿ, ಕೊರೊನಾ ತಡೆಗಟ್ಟಲು ಜನರ ಸಹಕಾರ ಅತಿ ಅಗತ್ಯವಾಗಿದೆ. ಆನರು ಜಾಗೃತರಾಗದಿದ್ದರೆ ನಿಯಂತ್ರಣದಲ್ಲಿರುವ ಕೊರೊನಾ ಮಾರಿ ಮತ್ತೇ ವ್ಯಾಪಿಸುವ ಸಂಭವವೇ ಹೆಚ್ಚು. ಎಲ್ಲರೂ ಸಾಮಾಜಿಕ ಅಂತರ, ಮಾಸ್ಕ್ ಬಳಕೆಯಿಂದ ಸುರಕ್ಷಿತ ಜೀವನ ನಡೆಸಬೇಕೆಂದರು.
ಶಂಕರ ಜುಂಜಪ್ಪನವರ ಮಾತನಾಡಿ, ಕಳೆದ ಏಳೆಂಟು ತಿಂಗಳಿಂದ ಕೊರೊನಾ ನಿಯಂತ್ರಣಕ್ಕಾಗಿ ಮನೆ ಬಿಟ್ಟು ಸಮಾಜದ ಮಧ್ಯೆ ಜನರ ಸುರಕ್ಷತೆಗಾಗಿ ಹೋರಾಡುತ್ತಿರುವ ನೂರಾರು ಕೊರೊನಾ ಯೋಧರಿಗೊಂದು ಸಲಾಂ ಹೇಳಿದರು.
ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ, ಪೌರಾಯುಕ್ತ ಶ್ರೀನಿವಾಸ ಜಾಧವ, ಗ್ರೇಡ್-2 ತಹಶೀಲ್ದಾರ ಎಸ್.ಬಿ. ಕಾಂಬಳೆ, ಮುಖ್ಯ ವೈದ್ಯಾಧಿಕಾರಿ ವಿ.ಜಿ. ಹುಡೇದಮನಿ, ಶಿರಸ್ತೆದಾರ ಎಸ್.ಎಲ್. ಕಾಗಿಯವರ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಎಸ್.ಬಿ. ಮಾಯನ್ನವರ, ಅಪ್ಪಾಜಿ ಹೂಗಾರ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಪ್ರೊ. ಬಿ.ಕೆ. ಕೊಣ್ಣೂರ, ಬನಹಟ್ಟಿ ಸಹಕಾರಿ ನೂಲಿನ ಗಿರಣಿ ಅಧ್ಯಕ್ಷ ವಿಜಯಕುಮಾರ ಜುಂಜಪ್ಪನವರ, ಮಲ್ಲಿನಾಥ ಕಕಮರಿ, ಸಿದ್ರಾಮ ಸವದತ್ತಿ, ಓಂಪ್ರಕಾಶ ಕಾಬರಾ, ಸುರೇಶ ಅಬಕಾರ, ದುಂಡಪ್ಪ ಮಾಚಕನೂರ, ಮಹಾಲಿಂಗ ಬಾಗಲಕೋಟ ಹಾಜರಿದ್ದರು.
Social Plugin