ತೇರದಾಳದ ಜಿಲ್ಲಾ ನೇಕಾರ ಪತ್ತಿನ ಸಹಕಾರಿ ಸಂಘದ ಸ್ಥಳೀಯ ಶಾಖೆಯಲ್ಲಿ ಸೋಮವಾರ ನೇಕಾರರಿಗೆ ಶೇ. 1ರ ಬಡ್ಡಿ ದರದಲ್ಲಿ ಸಾಲದ ಚಕ್‍ನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ವಿತರಿಸಿದರು.

 ವರದಿ : ವಿಜಯ ವಾಜಂತ್ರಿ

    

 ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ನೇಕಾರರಿಗೆ ಕಿವಿ ಮಾತು

 ತೇರದಾಳ : ನೇಕಾರರು ಆರ್ಥಿಕವಾಗಿ ಸಧೃಡರಾಗಲು ಸರಕಾರ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ಹೇಳಿದರು.

  ಪಟ್ಟಣದಲ್ಲಿ ಜಿಲ್ಲಾ ನೇಕಾರ ಪತ್ತಿನ ಸಹಕಾರಿ ಸಂಘದ ಸ್ಥಳೀಯ ಶಾಖೆಯಲ್ಲಿ ಸೋಮವಾರ ನೇಕಾರರಿಗೆ ಶೇ. 1ರ ಬಡ್ಡಿ ದರದಲ್ಲಿ ಸಾಲದ ಚಕ್‍ನ್ನು ವಿತರಿಸಿ ಮಾತನಾಡಿದ ಅವರು ರೈತ ಹಾಗೂ ನೇಕಾರರು ನಮ್ಮ ಎರಡು ಕಣ್ಣುಗಳಿದ್ದಂತೆ ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಗೊಂಡ ಹಿನ್ನಲೆಯಲ್ಲಿ ಶಾಸಕ ಸಿದ್ದು ಸವದಿಯವರನ್ನು ಬ್ಯಾಂಕ್ ಸ್ಥಳೀಯ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಯವರು ಸತ್ಕರಿಸಲಾಯಿತು.

   ಅಲ್ಲಪ್ಪ ಇಂಗಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಶಾಂತವ್ವ ರುದ್ರಪ್ಪ ಕಾಲತಿಪ್ಪಿ, ಸಂತೋಷ ಜಮಖಂಡಿ, ಕಾಶೀನಾಥ ರಾಠೋಡ, ಕುಮಾರ ಸರಿಕರ, ಸದಾಶಿವ ಹೊಸಮನಿ, ಹಾಪೀಜ್ ಮೌಲಾಲಿ, ಅಪ್ಪು ಮಂಗಸೂಳಿ, ಮಹಾವೀರ ಕೊಕಟನೂರ, ಶೀತಲ ಬೋಳಗೊಂಡ. ಮಹಾಲಿಂಗಪ್ಪ ಜಡಿ, ಶ್ರೀಶೈಲ ನಿವರಗಿ, ಆನಂದ ಕಂಪು, ಮಹಾದೇವ ಖವಾಸಿ,  ಶಂಕರ ತಂಬೂರಿ ಸೇರಿದಂತೆ ಇನ್ನಿತರರು ಇದ್ದರು.