ಮನೆ ಕಳೆದುಕೊಂಡು ಗೋಳಾಡಿದ ವೃದ್ಧ ದಂಪತಿಗೆ ನೆರವು
ರಬಕವಿ-ಬನಹಟ್ಟಿ,ಅ20: ತಾಲೂಕಿನಾದ್ಯಂತ ಕಳೆದ ವಾರ ಧಾರಾಕಾರ ಸುರಿದ ಭಾರಿ ಮಳೆಗೆ ಜಗದಾಳ ಗ್ರಾಮದ ವೃದ್ಧ ದಂಪತಿ ಮಹಾಂತಯ್ಯ ಹಾಗು ಚನ್ನಮ್ಮ ಹಿರೇಮಠ ಎಂಬುವರ ಮನೆ ಸಂಪೂರ್ಣ ನೆಲಸಮಗೊಂಡ ಪರಿಣಾಮ ಇವರ ಬದುಕನ್ನೇ ಬಯಲು ಮಾಡುವಲ್ಲಿ ಕಾರಣವಾಗಿದೆ. ಈ ಕುರಿತು ಪತ್ರಿಕೆಯು ದಿ.19 ರಂದು ವಿಸ್ತ್ರತ ವರದಿ ಮಾಡಿದ್ದನ್ನು ಅರಿತ ಅಧಿಕಾರಿಗಳು ದೌಡಾಯಿಸಿ ವೃದ್ಧ ದಂಪತಿ ಕುಟುಂಬಕ್ಕೆ ನೆರವಾಗುವಲ್ಲಿ ಯಶಸ್ವಿಯಾಗಿದ್ದಾರೆ.
ವಯೋವೃದ್ಧರಾಗಿರುವ ಇವರಿಗೆ ಮಕ್ಕಳಿಲ್ಲದೆ, ಕುಟುಂಬಕ್ಕೆ ಯಾವದೇ ಆಸರೆಯಿಲ್ಲ. ಮನೆ ಕಳೆದುಕೊಂಡು ಇದೀಗ ಮೂರ್ನಾಲ್ಕು ದಿನ ಬೇರೊಬ್ಬರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಕೈಯಲ್ಲಿ ದುಡ್ಡಿಲ್ಲ. ದುಡಿಮೆಗೆ ಶಕ್ತಿಯಿಲ್ಲ. ಹೀಗಿದ್ದಾಗ ಮಾಸಿಕ ಬರುವ ಪಡಿತರ ಆಹಾರ ಧಾನ್ಯದಿಂದಲೇ ಇವರ ಬದುಕು.
ಅಧಿಕಾರಿಗಳು ಕುಟುಂಬಕ್ಕೆ ಮಾನವೀಯತೆ ಮೆರೆದು ವೃದ್ಧ ದಂಪತಿಗೆ ನೆರವಾಗುವಲ್ಲಿ ಕಾರಣರಾಗಿದ್ದಾರೆ. ಸಹಾಯಕ್ಕೆ ನಿಂತ ಪತ್ರಿಕೆಗೆ ಹಿರೇಮಠ ದಂಪತಿ ಧನ್ಯವಾದ ತಿಳಿಸಿದರು

Social Plugin