(ಸ್ವರೂಪ ಸಂದರ್ಶನ : ಮ.ಕೃ.ಮೇಗಾಡಿ)
ಕಡಪಟ್ಟಿ : ಭಾರತೀಯರಿಗೆಲ್ಲಾ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಬಂತೆಂದರೆ ಎಲ್ಲಿಲ್ಲದ ಉತ್ಸಾಹ, ಹುಮ್ಮಸ್ಸು, ದೇಶಪ್ರೇಮ, ದೇಶಾಭಿಮಾನ ತುಂಬಿ ಸಂಭ್ರಮಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೇಶದೆಲ್ಲೆಡೆ ತ್ರಿವರ್ಣ ಧ್ವಜ ಬಾನೆತ್ತರ ಹಾರಿ, ನಮ್ಮ ಭಾರತದ ಶ್ರೇಷ್ಠ ಸಂಸ್ಕøತಿ, ಶಾಂತಿ, ಸೌಹಾರ್ಧತೆ, ಭಾವೈಕ್ಯತೆ, ಹಸಿರು ಸಿರಿ ಸಮೃದ್ಧಿ, ನಿರಂತರ ಪ್ರಗತಿಯತ್ತ ಚಲನೆಯ ಸಂಕೇತವಾಗಿ, ರಾಷ್ಟ್ರಾಭಿಮಾನ ಹೊಂದಿ ಕೇಸರಿ, ಬಿಳಿ, ಹಸಿರು ಭಾರತೀಯರು ಸಂಭ್ರಮಿಸುತ್ತೇವೆ.
ಕಳೆದ 2 ವರ್ಷಗಳಿಂದ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದ ದಿನಗಳಂದು ಕಡಪಟ್ಟಿ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಗರ್ಭಗುಡಿ ಕೇಸರಿ ಬಿಳಿ ಹಸಿರು ಬಣ್ಣದ ಹಾಳೆಗಳಿಂದ ನಿರ್ಮಿಸಿದ ರಾಷ್ಟ್ರಧ್ವಜದ ರೂಪತಾಳಿ ಭಕ್ತರನ್ನು ಕಣ್ತುಂಬಿಕೊಳ್ಳುವಂತೆ ಮಾಡುತ್ತದೆ. ಅದೇ ರೀತಿ ಶನಿವಾರ 74ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಚನ್ನಯ್ಯ ಶಂಕ್ರಯ್ಯ ಹರಗಣಿಮಠ ಅವರು ಆಕರ್ಷಕವಾಗಿ ಬಸವೇಶ್ವರ ಕಾಣುವಂತೆ ಗರ್ಭಗುಡಿ ತುಂಬ ಕೇಸರಿ ಬಿಳಿ ಹಸಿರು ಬಲೂನ್ ಕಟ್ಟಿ, ಬಣ್ಣದ ಹಾಳೆಗಳಿಂದ ರಾಷ್ಟ್ರಧ್ವಜದ ರೂಪದಂತೆ ಬಸವಣ್ಣನನ್ನು ಶೃಂಗರಿಸಿದ್ದಾರೆಂದು ಅರ್ಚಕ ಸಂಜು ಹರಗಣಿಮಠ ತಿಳಿಸಿದ್ದಾರೆ. ಇದು ಈ ದಿನದ ವಿಶೇಷವಾಗಿ ಗಮನ ಸೆಳೆದಿದೆ.
ಕೋವಿಡ್-19 ಕೊರೋನಾ ಭಯದ ಭೀತಿ ಒಂದೆಡೆ ಆವರಿಸಿ ಜನರನ್ನು ತಲ್ಲಣವನ್ನುಂಟು ಮಾಡಿದ್ದರೆ, ಈ ಸಂದರ್ಭದಲಿ ನಮ್ಮ ದೇಶಬಾಂಧವರೆಲ್ಲಾ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಬಳಸಿ, ಸೆನಿಟೈಸರ್ ಬಳಸಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವುದು ಎಲ್ಲೆಡೆ ಕಂಡುಬಂದಿದೆ.
ಫೋಟೊ ವಿವರ : ಕಡಪಟ್ಟಿ ಪವಾಡ ಬಸವೇಶ್ವರ ಗರ್ಭಗುಡಿ ರಾಷ್ಟ್ರಧ್ವಜದ ರೂಪದೊಂದಿಗೆ ಆಕರ್ಷಕವಾಗಿ ಕಂಗೊಳಿಸುತ್ತಿರುವ ದೃಶ್ಯ.
ಜಾಹೀರಾತು...
Social Plugin