
ತೇರದಾಳದ ಶ್ರೀಅಲ್ಲಮಪ್ರಭು ದೇವರ ದೀಪ ನಗಾರಿಯಂದು ಕಂಡು ಬಂದ ದೃಶ್ಯ.
ಶ್ರೀಅಲ್ಲಮಪ್ರಭುದೇವರ ಜಾತ್ರೆ ರದ್ದು
ತೇರದಾಳ : ಪಟ್ಟಣ ಆರಾಧ್ಯ ದೈವ ಶ್ರಿಅಲ್ಲಮಪ್ರಭು ದೇವರ ಜಾತ್ರೆಯನ್ನು ಈ ವರ್ಷ ಕೊರೊನಾ ವೈರಾಣುವಿನ ನಿಮಿತ್ಯ ರದ್ದು ಪಡಿಸಲಾಗಿದೆ ಎಂದು ಪಟ್ಟಣದ ಧನಿಗಳಾದ ಪ್ರವೀಣ ನಾಡಗೌಡ ಹಾಗೂ ದೇವಸ್ಥಾನದ ಚೇರಮನ್ರು ಮತ್ತು ದೇವಸ್ಥಾನದ ಸಮಸ್ತ ಅರ್ಚಕರು ತಿಳಿಸಿದ್ದಾರೆ.
ಪ್ರತಿ ವರ್ಷ ಶ್ರಾವಣ ಕೊನೆಯ ಸೋಮವಾರ ದಿನ ಶ್ರೀಅಲ್ಲಮಪ್ರಭುದೇವರ ಜಾತ್ರೆಯು ಅತಿ ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ ಈ ವರ್ಷ ಕೊರೊನಾ ವೈರಾಣುವಿನ ಅಬ್ಬರದಿಂದಾಗಿ ಸರಕಾರ ಎಲ್ಲ ಜಾತ್ರೆ ಹಬ್ಬ ಹರಿದಿನಗಳನ್ನು ಹಾಗೂ ಸಂತೆ, ಮದುವೆ ಮುಂಜುವೆ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ ಮಾಡಿದ್ದು ಕಾರಣ ಇಂತಹ ಸಂದರ್ಭದಲ್ಲಿ ಹೆಚ್ಚಿನ ಜನ ಸೇರಿಕೊಳ್ಳುವುದರಿಂದ ಕೊರೊನಾ ಒಬ್ಬರಿಂದ ಒಬ್ಬರಿಗೆ ಹರಡುವ ಸಂಭವವಿರುವುದರಿಂದ ಇದಾವುದನ್ನು ನಡೆಸಕೂಡದು ಎಂದು ತಿಳಿಸಿರುವ ಹಿನ್ನಲೆಯಲ್ಲಿ ಈ ವರ್ಷದ ಶ್ರೀಅಲ್ಲಮಪ್ರಭು ದೇವರ ಜಾತ್ರೆಯನ್ನು ರದ್ದು ಪಡಿಸಲಾಗಿದೆ. ಹಾಗೂ ಪ್ರತಿ ವರ್ಷ ಜಾತ್ರೆಯ ಮರು ದಿನ ಜಂಗಿ ನಿಕಾಲಿ ಕುಸ್ತಿಗಳು ನಡೆಯುತ್ತಿದ್ದವು ಅದನ್ನು ಸಹ ರದ್ದು ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅದರೆ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗುವವು. ಮತ್ತು ದೇವಸ್ಥಾನದ ಅರ್ಚಕರಿಂದ ಶ್ರೀಅಲ್ಲಮಪ್ರಭು ದೇವರ ಸೇವಾ ನಡೆಯುವುದು ಕಾರಣ ಸದ್ಭಕ್ತರು ಸಹಕರಿಸಬೇಕು ಎಂದು ದೇವಸ್ಥಾನದ ಅರ್ಚಕರಾದ ಆನಂದ ಹಿತ್ತಲಮನಿ ಬಂಧುಗಳು ತಿಳಿಸಿದ್ದಾರೆ.

ಜಾಹಿರಾತು...
Social Plugin