ರಬಕವಿ-ಬನಹಟ್ಟಿ ಸಮೀಪ ಕೃಷ್ಣೆಯು ತನ್ನ ಒಡಲೊಳಗೆ ಶಾಂತವಾಗಿ ಹರಿಯುತ್ತಿರುವದು.
ಶಾಂತವಾಗಿ ಹರಿಯುತ್ತಿರುವ ಕೃಷ್ಣೆ: ನೀರು ಇಳಿಮುಖ
ರಬಕವಿ-ಬನಹಟ್ಟಿ,ಅ16:ಕಳೆದ ವರ್ಷ ಈ ಸಂದರ್ಭದಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದ ಕೃಷ್ಣಾ ನದಿಯು ಇದೀಗ ನೀರು ಸಂಪೂರ್ಣ ಕೃಷ್ಣೆಯು ತನ್ನ ಒಡಲೊಳಗೆ ಹರಿಯುತ್ತಿದೆ. ನಿರೀಕ್ಷೆಗಿಂತಲೂ ಕಡಿಮೆ ನೀರನ್ನು ಹಿಡಿದಿಟ್ಟುಕೊಂಡು ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯದಲ್ಲಿರುವ ಎಲ್ಲ್ 22 ಗೇಟ್ಗಳ ಮೂಲಕ ನೀರು ಮಹಾರಾಷ್ಟ್ರದಿಂದ ಬಂದಷ್ಟೇ ಹೊರ ಹಾಕಲಾಗುತ್ತಿದೆ.
ಕೃಷ್ಣೆಯು ಈಗ ನೀರಿನ ಅಬ್ಬರ ನಿಲ್ಲಿಸಿದ್ದು ಶಾಂತವಾಗಿ ಹರಿಯುತ್ತಿರುವದು ಎಲ್ಲರ ನೆಮ್ಮದಿಗೆ ಕಾರಣವಾಗಿದೆ. ಮಹಾರಾಷ್ಟ್ರದಿಂದ ರವಿವಾರದಂದು ಸದ್ಯ 99,500 ಕ್ಯುಸೆಕ್ನಷ್ಟು ನೀರು ಹರಿದು ಬರುತ್ತಿದೆ. ಬಂದಷ್ಟೆಲ್ಲ ನೀರು ಹೊರ ಹಾಕಲಾಗುತ್ತಿರುವ ಕಾರಣ ಅಧಿಕಾರಿಗಳು ಮುಂದಾಲೋಚಣೆಯಿಂದ ಪ್ರವಾಹ ತಪ್ಪಿಸುವಲ್ಲಿ ಸಕಲ ಸಿದ್ಧತೆಯಲ್ಲಿದ್ದು, ಹಿಪ್ಪರಗಿ ಜಲಾಶಯದಲ್ಲಿ ಸದ್ಯ ಯಾವದೇ ರೀತಿ ನೀರನ್ನು ಸಂಗ್ರಹ ಮಾಡುತ್ತಿಲ್ಲ.
ಜಾಹಿರಾತು...
Social Plugin