ತೇರದಾಳ: ತೇರದಾಳ ಪಟ್ಟಣದಲ್ಲಿ ಹಲವಾರು ವೈದ್ಯರು ಕೊರೋನಾ ಕಾರಣದಿಂದ ತಮ್ಮೆಲ್ಲ ಆಸ್ಪತ್ರೆಗಳ ಸೇವೆಯನ್ನು ಸ್ಥಗಿತಗೊಳಿಸಿದ ಕಾರಣಕ್ಕಾಗಿ ಎಷ್ಟೋ ಬಡವರು ಅನಾರೋಗ್ಯಕ್ಕಿಡಾಗಿ ತುಂಬಾ ಕಷ್ಟಅನುಭವಿಸುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಕಾರಣಕ್ಕಾಗಿ ತಾಲೂಕಾ ದಂಡಾಧಿಕಾರಿ ಪ್ರಶಾಂತ ಚನಗೊಂಡ ಇವರು ಪಟ್ಟಣದಲ್ಲಿಯ ಎಲ್ಲ ವೈದ್ಯರ ಹಾಗೂ ಔಷಧಿ ವ್ಯಾಪಾರಸ್ಥರ ಸಭೆ ಸೇರಿಸಿ ಈ ಬಗ್ಗೆ ಚರ್ಚೆಮಾಡಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಇಂದು ದಿನಾಂಕ 11-08-2020 ಮಂಗಳವಾರ ಕೈಕೊಂಡ ಸಭೆಯನ್ನುದ್ದೇಶಿಸಿ ಮಾತನಾಡಿದ ತಹಶೀಲದಾರರವರು ಈ ಬಗ್ಗೆ ಎಲ್ಲ ವೈದ್ಯರಿಗೆ ಹಾಗೂ ಔಷಧಿ ವ್ಯಾಪಾರಸ್ಥರಿಗೆ ಸ್ಥಗಿತಗೊಳಿಸಿದ ಸೇವೆಯ ಕುರಿತು ಸಕಾರಣ ಕೇಳಿದರು ಈ ಸಂದರ್ಭದಲ್ಲಿ ಸಾಕಷ್ಟು ವೈದ್ಯರುಗಳಾದ ಡಾ: ಕೋಪಾಟಿ ಡಾ: ಆಲಗೂರ,ಡಾ: ಭುಜಕ್ಕನವೆರ ವೈದ್ಯಕೀಯ ಸೇವೆ ಸಲ್ಲಿಸುವಲ್ಲಿ ತಮಗಾಗುತ್ತಿರುವ ಹಲವಾರು ಸಮಸ್ಯೆಗಳ ಕುರಿತು ಹೇಳಿದರು. ಅಂಬ್ಯೂಲನ್ಸ ,ಆಕ್ಸಿಜನ್ ಸೇವೆ ಕೊರತೆ,ಪಿ.ಪಿ.ಕಿಟ್ಗಳ ಅನಾನುಕೂಲತೆ, ವೈದ್ಯರ ಮೇಲಾಗುತ್ತಿರುವ ಹಲ್ಲೆ, ನಾವು ಚಿಕಿತ್ಸೆಕೊಟ್ಟ ವ್ಯಕ್ತಿಗೆ ಸೋಂಕು ತಗುಲಿದರೆ ಈಡಿ ಆಸ್ಪತ್ರೆಯನ್ನೇ ಶೀಲಡೌನ ಮಾಡಿ ನಮ್ಮನ್ನೊಂದು ಕಡೆ ನಮ್ಮ ಕುಟುಂಬವನ್ನೊಂದುಕಡೆ ಕ್ವಾರಂಟೈನಲ್ಲಿ ಇಡುವ ವ್ಯವಸ್ಥೆಯಿಂದ ನಮಗಾಗುವ ಮಾನಸಿಕ ಹಿಂಸೆ ಹೀಗೆ ಹತ್ತು ಹಲವಾರು ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ಹೇಳಿದರು.
ಎಲ್ಲಾ ವಿಷಯಗಳನ್ನು ಸಮಚಿತ್ತದಿಂದ ಆಲಿಸಿದ ತಹಶೀಲದಾರರವರ ಇನ್ನು ಮುಂದೆ ತಾವು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವ ಕಾರಣವಿಲ್ಲ ಸರಕಾರ ನಿಮ್ಮ ಹಿಂದೆ ಇರುತ್ತದೆ. ತಾವು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಳುಕದೆ ತಮ್ಮ ಸೇವೆಯನ್ನು ಪುನಃ ಪ್ರಾರಂಭಿಸಬೇಕು. ಜನರ ರಕ್ಷಣೆಗಾಗಿ ನಾವೆಲ್ಲ ಕೂಡಿ ಕೆಲಸ ಮಾಡುವ ಅವಶ್ಯಕತೆ ಇದೆ. ತೇರದಾಳ ಪಟ್ಟಣದಲ್ಲಿ ಕೇಸುಗಳು ಹೆಚ್ಚಾಗಲು ಕಾರಣವೇನಂದರೆ ನಾವು ಇಲ್ಲಿ ಹೆಚ್ಚುಜನರನ್ನು ತಪಾಸಣೆಗೊಳಪಡಿಸಿದ್ದೇವೆ ಹೀಗಾಗಿ ಕೇಸುಗಳು ಹೆಚ್ಚಾಗಿರುತ್ತವೆ.ಆದರೂ ತಾವು ಹೆದರುವ ಅವಶ್ಯಕತೆಯಿಲ್ಲ ಏಕೆಂದರೆ ಆ ಎಲ್ಲ ಜನರನ್ನು ನಾವು ಗುಣಮುಖರನ್ನಾಗಿ ಮಾಡಿ ಕಳುಹಿಸುತ್ತೇವೆ.ಕಾರಣ ಸಾರ್ವಜನಿಕರು ಆತಂಕಪಡಬಾರದು ಎಂದು ಹೇಳಿದರು. ಸುಮಾರು ವರ್ಷಗಳಿಂದ ತಾವೆಲ್ಲ ಒಳ್ಳೆರೀತಿಯಿಂದ ಸೇವೆ ಸಲ್ಲಿಸಿದ್ದೀರಿ.ಜನ ನಿಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿದೆ ಆದ್ದರಿಂದ ಅವರಿಗೆ ನಿಮ್ಮ ಅವಶ್ಯಕತೆ ಇದೆ.ನಿಮ್ಮ ವೃತ್ತಿಗೆ ಧಕ್ಕೆಯಾಗದ ರೀತಿಯಲ್ಲಿ ನಾವು ತಮ್ಮ ಬೆಂಬಲಕ್ಕೆ ಇರುತ್ತವೆ ಕಾರಣ ನಾವೆಲ್ಲ ಸೇರಿ ಎಲ್ಲರ ರಕ್ಷಣೆ ಮಾಡೋಣ.ದಯವಿಟ್ಟು ತಮ್ಮ ಸೇವೆ ಮುಂದುವರೆಸಿ ಎಂದು ವಿನಂತಿಸಿಕೊಂಡರು. ಸಬೆಯಲ್ಲಿದ್ದ ಸಾಕಷ್ಟು ವೈದ್ಯವೃಂದ ಹಾಗೂ ಔಷಧಿ ವ್ಯಾಪಾರಸ್ಥರು ಇದಕ್ಕೆ ಸಮ್ಮತಿ ಸೂಚಿಸಿದರು.
ಈ ಸಂದರ್ಭದಲ್ಲಿ ಉಪತಹಶೀಲದಾರರಾದ ಎಸ್.ಬಿ.ಮಾಯನ್ನವರ, ಮುಖ್ಯಾಧಿಕಾ ಈರಣ್ಣ ದಡ್ಡಿ, ಸರಕಾರಿ ಆಸ್ಪತ್ರೆ ವೈದ್ಯರಾದ ಡಾ: ಸುದರ್ಶನ ನಿಡೋಣಿ, ಗ್ರಾಮಲೆಕ್ಕಾಧಿಕಾರಿ ಪಿ.ಮಠಪತಿ,ಹಾಗೂ ಪಟ್ಟಣದ ವೈದ್ಯರುಗಳಾದ ಡಾ: ಶೇಗುಣಶಿ .ಡಾ: ಅಥಣಿ ಡಾ: ಅಪರಾಜ ಡಾ:ನಾಗನೂರ ಸೇರಿದಂತೆ ಸಾಕಷ್ಟು ವೈದ್ಯರು ಮತ್ತು ಹಿರಿಯ ಔಷಧಿ ವ್ಯಾಪಾರಸ್ಥರಾದ ರಮೇಶ ಅವರಾದಿ, ಮುಕುಂದ ಮೆಡಿಕಲ್,ಹೋಲಸೇಲ ಔಷಧ ವ್ಯಾಪಾರಸ್ಥರಾದ ಬಸವರಾಜ ಪಟ್ಟಣಶೆಟ್ಟಿ ಸೇರಿದಂತೆ ಎಲ್ಲ ಔಷಧಿ ಅಂಗಡಿ ಮಾಲಿಕರು ಉಪಸ್ಥಿತರಿದ್ದರು.ಪುರಸಭೆಯ ಸದಸ್ಯರುಗಳಾದ ಶಂಕರ ಕುಂಬಾರ,ಸಂಗಮೇಶ ಕಾಲತಿಪ್ಪಿ,ಕೇದಾರಿ ಪಾಟೀಲ,ಅಲ್ಲಪ್ಪ ಬಾಬಗೊಂಡ,ಸಚಿನ ಕೊಡತೆ,ಕುಮಾರ ಸರಿಕರ,ಸದಾಶಿವ ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು.
Social Plugin