ಬನಹಟ್ಟಿಯಲ್ಲಿ ಸಿದ್ಧರಾಮೇಶ್ವರ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಟಂ ಟಂ ವಾಹನವನ್ನು ಶೃಂಗರಿಸಿ ಅದರಲ್ಲಿಯೇ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದರು.
ನಿಯಮಗಳಿಂದ ಕಂಗಾಲಾಗಿ ಟಂಟಂನಲ್ಲಿ ಕುಳಿತ ಗಣಪ
ರಬಕವಿ-ಬನಹಟ್ಟಿ,ಅ24: ಮಾರಕ ರೋಗ ಕೊರೊನಾ ಎಂಥೆಂಥಾ ಪ್ರಸಂಗಗಳನ್ನು ತಂದೊಡ್ಡಿದೆ ಎನ್ನುವದಕ್ಕೆ ವಿಘ್ನ ವಿನಾಶಕನ ಹಬ್ಬವೂ ಕಾರಣವಾಗಿದೆ. ಕೊರೊನಾ ನಿಯಂತ್ರಣ ಸಲುವಾಗಿ ಸರ್ಕಾರ ಗಣೇಶ ಹಬ್ಬಕ್ಕೆ ಮೂಗುದಾರ ಹಾಕಿರುವ ಕಾರಣ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ನೂರಕ್ಕೂ ಅಧಿಕ ಗಣೇಶ ಮೂರ್ತಿಗಳು ರಸ್ತೆಯ ಮಧ್ಯ ಹಾಗು ಪಕ್ಕದಲ್ಲಿ ಅಲ್ಲಲ್ಲಿ ರಾರಾಜಿಸುತ್ತಿದ್ದವು. ಈ ಬಾರಿ ದೇವಸ್ಥಾನ, ಮೈದಾನಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸಿದೆ.
ಬನಹಟ್ಟಿಯಲ್ಲೊಂದು ಗಣೇಶನನ್ನು ಟಂಟಂ ವಾಹನದಲ್ಲಿ ಕೂಡ್ರಿಸಿ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಹೌದು ನಗರದ ಸಿದ್ಧರಾಮೇಶ್ವರ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಈ ರೀತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮೂರ್ತಿ ಪ್ರತಿಷ್ಠಾಪನೆಯು ಪ್ರತಿ ವರ್ಷಕ್ಕಿಂತ ಕಡಿಮೆಯಾಗಿದ್ದು, ಎಲ್ಲೆಡೆ ಹಬ್ಬದ ವಾತಾವರಣವೇ ಕಂಡು ಬರುತ್ತಿಲ್ಲ. ಬಹುತೇಕ ಗಜಾನನ ಉತ್ಸವ ಸಮಿತಿಯವರು ಏಳು ದಿನಗಳ ಕಾಲ ಪ್ರತಿಷ್ಠಾಪನೆ ಮಾಡುತ್ತಿರುವದನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿ ಶನಿವಾರದಂದೇ ವಿಸರ್ಜನೆ ಮಾಡಿದ ಪ್ರಸಂಗ ನಡೆದಿವೆ.
ಜಾಹಿರಾತುದಾರರು...
Social Plugin