ಪಿರನವಾಡಿ ಘಟನೆ ಖಂಡಿಸಿ ರಬಕವಿ-ಬನಹಟ್ಟಿ ಉಪತಹಶೀಲ್ದಾರ ಎಸ್. ಎಲ್ ಕಾಗಿಯವರ ಅವರಿಗೆ ರಾಯಣ್ಣ ಅಭಿಮಾನಿ ಬಳಗದಿಂದ ಮನವಿ ಅರ್ಪಣೆ.
ಪಿರನವಾಡಿ ಘಟನೆ ಖಂಡಿಸಿ ರಾಯಣ್ಣ ಅಭಿಮಾನಿ ಬಳಗದಿಂದ ಮನವಿ
ರಬಕವಿ-ಬನಹಟ್ಟಿ,ಅ19: ಬೆಳಗಾವಿ ಜಿಲ್ಲೆಯ ಪಿರನವಾಡಿಯಲ್ಲಿ ರಾಯಣ್ಣ ಮೂರ್ತಿಯನ್ನು ಕಿತ್ತುಕೊಂಡು ಪೊಲೀಸ ಇಲಾಖೆ ದೌರ್ಜನ್ಯ ಎಸಗಿರುವುದನ್ನು ವಿರೋಧಿಸಿ ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ಉಪತಹಶೀಲ್ದಾರ ಎಸ್. ಎಲ್ ಕಾಗಿಯವರ ಅವರಿಗೆ ಕ್ರಾಂತಿವೀರ ಸಂಗ್ಗೋಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ರಾಯಣ್ಣ ಅಭಿಮಾನಿ ಬಳಗದವರು ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ ಜಿಡ್ಡಿಮನಿ, ಕರುನಾಡಲ್ಲಿ ಸಂಗೋಳ್ಳಿ ರಾಯಣ್ಣನಿಗೆ ಅನ್ಯಾಯವಾಗುವುದನ್ನು ಯಾರೊಬ್ಬರು ಕ್ಷಮಿಸುವುದಿಲ್ಲ. ಹಾಗೂ ಸುಮ್ಮನೇ ಕೂಡ್ರುವುದಿಲ್ಲ. ಕನ್ನಡ ನಾಡಿನಲ್ಲಿ ರಾಯಣ್ಣನಿಗೆ ಅವಮಾನ ಮಾಡಿರುವುದು ಸರಿಯಲ್ಲ. ಮೂರ್ತಿ ಸ್ಥಾಪನೆಗೆ ಅಡೆ ತಡೆ ಮಾಡಿದ್ದು ಖಂಡನೀಯ. ಅದಕ್ಕಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಹೋರಾಟ ರಾಜ್ಯ ಮತ್ತು ದೇಶ್ಯಾದ್ಯಂತ ಹರಡುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು. ಸರಕಾರ ರಾಯಣ್ಣ ಮೂರ್ತಿಯನ್ನು ಮರುಸ್ಥಾಪಿಸಲು ಅನುಮತಿ ನೀಡಬೇಕು. ಸÀಕಲ ಗೌರವಗಳೊಂದಿಗೆ ಪಿರನವಾಡಿಯಲ್ಲಿ ರಾಯಣ್ಣ ಮೂರ್ತಿಯನ್ನು ಸ್ಥಾಪಿಸಬೇಕು. ಇಲ್ಲವಾದಲ್ಲಿ ರಾಜ್ಯದ ತುಂಬೆಲ್ಲ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಪ್ಪ ಮಹಿಷವಾಡಗಿ, ದುಂಡಪ್ಪ ಕುಡುಚಿ, ವಿಠ್ಠಲ್ ಮಹಿಷವಾಡಗಿ, ಮಾಳು ದುರ್ಗನ್ನವರ, ದೇವೇಂದ್ರ ಅಸ್ಕಿ, ಹನುಮಂತ ಎಕ್ಕೆಲಿ, ಭಿಮ್ಮಪ್ಪ ಭುಜಂಗ, ಜಕ್ಕಪ್ಪ ಜಿಡ್ಡಿಮನಿ, ಮಾಳು ಹಿಪ್ಪರಗಿ, ನಾಗಪ್ಪ ಬಂಗೆನ್ನವರ, ಹನುಮಂತ ಮಹಿಷವಾಡಗಿ, ಹಾಗೂ ರಬಕವಿ ಬನಹಟ್ಟಿ ತಾಲ್ಲೂಕಿನ ರಾಯಣ್ಣ ಅಭಿಮಾನಿ ಬಳಗದ ಎಲ್ಲ ಯುವಕರು ಕುರುಬ ಸಮಾಜದ ಯುವಕರು ಇದ್ದರು.
ಜಾಹಿರಾತು...
Social Plugin