ಧರ್ಮ-ಸಂಸ್ಕಾರದಿಂದ ನೆಮ್ಮದಿ-ಚಿಕ್ಕರೇವಣಸಿದ್ಧ ಶ್ರೀ
ಧರ್ಮ-ಸಂಸ್ಕಾರದಿಂದಲೇ ಮಾನವ ಸಮುದಾಯಕ್ಕೆ ನೆಮ್ಮದಿಯೆಂದು ಹಟಗಾರ ಪೀಠದ ಜಗದ್ಗುರು ಶ್ರೀ ಚಿಕ್ಕರೇವಣಸಿದ್ಧ ಶರಣರು ನುಡಿದರು.
ಅವರು ಬನಹಟ್ಟಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಂತರ ಅಂಬಲಿ ನಿವಾಸಕ್ಕೆ ಭೆಟ್ಟಿ ನೀಡಿ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಬ್ಬರೂ ಮಠ, ಮಂದಿರಗಳಲ್ಲಿ ಆಯೋಜಿಸುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಅಂದಾಗ ಮಾತ್ರ ಸಾತ್ವಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದರು.ಹಲವಾರು ಶಿವಯೋಗಿಗಳು ತಮ್ಮ ಜೀವನದುದ್ದಕ್ಕೂ ಭಕ್ತರ ಉದ್ದಾರಕ್ಕಾಗಿ ಶ್ರಮಿಸಿದ ಶ್ರೇಷ್ಠ ಸಂತರಾಗಿದ್ದಾರೆ. ಅವರ ಸಮಾಜಮುಖಿ ಚಿಂತನೆಗಳು ಈಗಲೂ ಸಾರ್ವಕಾಲಿಕ ಸತ್ಯದಿಂದ ಕೂಡಿವೆ ಎಂದರು.
ಇದೇ ಸಂದರ್ಭ ಆನಂದ ಮಹಾಸ್ವಾಮಿಗಳು, ಸೋಮನಾಥ ಗೊಂಬಿ, ಶ್ರೀಶೈಲ ದಭಾಡಿ, ಸುರೇಶ ಬೀಳಗಿ, ವಿರುಪಾಕ್ಷಪ್ಪ ಕೊಕಟನೂರ, ಶೇಖರ ಮಾಲಾಪುರ, ದಾನಪ್ಪ ಹುಲಜತ್ತಿ, ಅರವಿಂದ ಹೊರಟ್ಟಿ, ಶೇಖರ ಇಟ್ನಾಳ, ಬಾಳು ಗಣೇಶನವರ, ಪ್ರವೀಣ ಕೋಲಾರ, ರಮೇಶ ಕೊಣ್ಣೂರ ಸೇರಿದಂತೆ ಅನೇಕರಿದ್ದರು.