ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯ ದೊರಕಲಿ
ರಬಕವಿ-ಬನಹಟ್ಟಿ,ಸೆ30:ಸಮಾಜದ ಅರ್ಹ ಫಲಾನುಭವಿಗಳಿಗೆ ಸರಕಾರದ ವಿವಿಧ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಶ್ಲಾಘನೀಯ ಎಂದು ತೇರದಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಸಿದ್ದು ಸವದಿ ಅಭಿಪ್ರಾಯ ಪಟ್ಟರು.
ಅವರು ರಾಮಪುರ ಮಲ್ಲಿಕಾರ್ಜುನ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಆಯೋಜಿಸಿದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ 606 ಫಲಾನುಭವಿಗಳಿಗೆ ಕಾರ್ಡ ವಿತರಣೆ ಮಾಡಿ ಚಾಲನೆ ನೀಡಿದರು. ಸರ್ಕಾರದ ಯಾವುದೇ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕಾಗಿದ್ದು, ನಮ್ಮ ಜನಾಬ್ಧಾರಿಯಾಗಿರುತ್ತದೆ. ಆರ್ಥಿಕವಾಗಿ ಬಡತನದಲ್ಲಿರುವ ಕುಟುಂಬಗಳಿಗೆ ಆಯುಷ್ಮಾನ ಯೋಜನೆ ಮಹತ್ವವಾಗಿದ್ದು, ನಿಗದಿ ಪಡಿಸಿರುವ ಆಸ್ವತ್ರೇಯಲ್ಲಿ 5 ಲಕ್ಷ ಉಚಿತ ಚಿಕಿತ್ಸೆ ಪಡೆಯಲು ಸಹಕಾರಿ ಆಗದೆ ಎನ್ನುತ್ತ ಇದರೊಂದಿಗೆ ಸುಕನ್ಯಾ ಸಮೃದ್ದಿ ಯೋಜನೆ, ಕಾರ್ಮಿಕರ ಕಾರ್ಡ ಹೀಗೆ ಹಲವು ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳನ್ನು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೋವಿಡ್-19 ಬಗ್ಗೆ ಸರ್ಕಾರದ ಹಾಗೂ ಆರೊಗ್ಯ ಇಲಾಖೆಯ ಆದೇಶ ಪಾಲನೆ ಮಾಡಿ ಕೋವಿಡ್ ವಿರುದ್ದ ಸೈನಿಕರಂತೆ ಮಾಸ್ಕ ಹಾಕಿ ಸಾಮಾಜಿಕ ಅಂತರದೊಂದಿಗೆ ಕೊರೊನಾ ವೈರಸ್ನ್ನು ಸೋಲಿಸೋಣ ಎಂದರು. ಜಿಲ್ಲಾ ನಿರ್ದೇಶಕರಾದ ಮಹೇಶ ಎಂ.ಡಿ ಮಾತನಾಡಿದರು.
ವೈದ್ಯಾದಿಕಾರಿ ಎಂ.ಕೆ. ಮುಲ್ಲಾ ಮಾತನಾಡಿ ಇಲಾಖಾ ಸೌಲಭ್ಯ ಹಾಗೂ ಕೋವಿಡ್ ಮುಂಜಾಗೃತೆ ಬಗ್ಗೆ ಮಾತನಾಡಿದರು. ಆಯುಷ್ಮಾನ ಭಾರತ ಕಾರ್ಡ ಸೌಲಭ್ಯಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಧರೆಪ್ಪಾ ಉಳ್ಳಾಗಡ್ಡಿ, ಉಪತಹಶೀಲ್ದಾರ ಬಿ.ಎಂ ಬಿಜ್ಜರಗಿ, ಆಹಾರ ಅಧಿಕಾರಿ ಪಿ.ಎಸ್. ವಂದಾಲ, ವಿಜಯಲಕ್ಷ್ಮೀ ಡೊಮನಾಳ, ನಗರಸಭಾ ಸದಸ್ಯೆ ರೇಖಾ ಕೊರತೆ, ಎನ್.ಎಮ್. ಕವಟಗಿ, ಲಕ್ಷ್ಮಣ ಬಿ. ವಿಲಾಸ ಪೂಜಾರಿ, ಶೈಲಜಾ ಹೊಸಕೋಟಿ, ವಿದ್ಯಾ ಅಕ್ಷತಾ, ಕೀರ್ತಿ ಸೇರಿದಂತೆ ಅನೇಕರಿದ್ದರು.

Social Plugin