ರಬಕವಿ-ಬನಹಟ್ಟಿ,ಅ13: ಸ್ಥಳೀಯ ಮಾಹೇಶ್ವರಿ ಸಮಾಜದ ಬಾಂಧವರು ಬುಧವಾರ ರಾತ್ರಿ ಗೋಕುಲಾಷ್ಠಮಿ ನಿಮಿತ್ತವಾಗಿ ಬಾಲಾಜಿ ಮಂದಿರದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಸಿದರು.
ಅರ್ಚಕರಾದ ಗಿರೀಶ ಚತುರ್ವೇದಿ ಮತ್ತು ಪುನೀತ ಚತುರ್ವೇದಿ ತೊಟ್ಟಿಲೋತ್ಸವ ಮತ್ತು ಆರತಿ ಕಾರ್ಯಕ್ರಮ ನಡೆಸಿಕೊಟ್ಟರು. ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಕೈಗೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಲಲಿತಕುಮಾರ ಕಾಬರಾ ಮಾತನಾಡಿ, ಕೋವಿಡ್-19 ನಿಮಿತ್ತವಾಗಿ ಐದು ದಿನಗಳ ಕಾರ್ಯಕ್ರಮದ ಬದಲಾಗಿ ಕೇವಲ ಒಂದು ಗಂಟೆಯ ಕಾರ್ಯಕ್ರಮವನ್ನು ಮಾತ್ರ ಹಮ್ಮಿಕೊಳ್ಳಲಾಯಿತು. ಸಮಾಜದ ಪದಾಧಿಕಾರಿಗಳು ಮಾತ್ರ ಭಾಗವಹಿಸಿದ್ದರು ಎಂದರು.
ಲಲಿತಕುಮಾರ ಕಾಬರಾ, ಶ್ಯಾಮ ಲೋಹಿಯಾ, ಶ್ರೀರಂಗ ಮಾಲಪಾಣಿ, ನಟವರ ಕಾಬರಾ, ಪಂಕಜ ತೋತ್ಲಾ, ಗಿರೀಶ ಭಟ್ಟಡ, ರಾಜು ಡಾಗಾ, ನಾರಾಯಣ ಡಾಗಾ ಗೋಕುಲ ಕಾಬರಾ ಇದ್ದರು.



Social Plugin