ತೇರದಾಳ : ಇಲ್ಲಿಗೆ ಸಮೀಪದ ಹನಗಂಡಿ ಗ್ರಾಮದ ದಿಗಂಬರೇಶ್ವರ ದೇವಸ್ಥಾನ ಜಾತ್ರೆಯು ಈ ವರ್ಷ ಕೊರೊನಾ ವೈರಾಣು ದೇಶದಲ್ಲೆಡೆ ವ್ಯಾಪಿಸಿರುವ ಹಿನ್ನಲೆ ಜಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ಹನಗಂಡಿ ದಿಗಂಬರೇಶ್ವರ ಜಾತ್ರಾ ಕಮೀಟಿಯವರು ತಿಳಿಸಿದ್ದಾರೆ.
ಜಾತ್ರೆಯು ಪ್ರತಿ ವರ್ಷ ಶ್ರಾವಣ ಮಾಸದ 4ನೇ ಶನಿವಾರ ನಡೆಯುತ್ತಿತ್ತು. ಆದರೆ ಕೊರೊನಾ ವೈರಾಣು ದೇಶದಲ್ಲೆಡೆ ವ್ಯಾಪಿಸಿರುವ ಹಿನ್ನಲೆ ಸರಕಾರ ಜನರು ಗುಂಪುಗೂಡುವದನ್ನು ನಿಷೇಧಿಸಲಾಗಿರುವುದರಿಂದ ಜಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ದಿಗಂಬರೇಶ್ವರ ಜಾತ್ರಾ ಕಮೀಟಿಯವರು ತಿಳಿಸಿದ್ದಾರೆ. ಜಾತ್ರೆ ನಿಮಿತ್ಯ ನಡೆಯುವಂತಹ ರಥೋತ್ಸವ ಹಾಗೂ ಕುಸ್ತಿಗಳು ನಡೆಯುವುದಿಲ್ಲವೆಂದು ಅವರು ತಿಳಿಸಿದ್ದಾರೆ.
Social Plugin