ತೇರದಾಳ ಮತಕ್ಷೇತ್ರ : ಸ್ವಾತಂತ್ರ್ಯ ನಮಗೆ ಪುಕ್ಸಟ್ಟೆ ಸಿಕ್ಕಿಲ್ಲ, ಅದರ ಹಿಂದೆ ಸಾಕಷ್ಟು ತ್ಯಾಗವಿದೆ.ಬಲಿದಾನವಿದೆ-ಶಾಸಕ ಸಿದ್ದು ಸವದಿ 

 

ವರದಿ ಕೆ.ಎಸ್.ರಂಗಸ್ವಾಮಿ 


ಜಾಹೀರಾತುದಾರರು : ಗಂಗೋತ್ರಿ ನರ್ಸರಿ .ಬೆಳಗಾವಿ ರೋಡ ಚಿಕ್ಕೋಡಿ . ಮಾಲೀಕರು - ಕಲ್ಮೇಶ ಶೇಡಬಾಳ . ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ,ಹಾಗೂ ಸುಪ್ರಸಿದ್ದ ಉತ್ಕಷ್ಟವಾದ ಗಾರ್ಡನ್ ತಯಾರಕರು .ಸಂಪರ್ಕಿಸಿ : ೯೪೮೨೯೧೯೯೮೩... ೯೫೩೫೭೧೯೦೫೩...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515 ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175 ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

ತೇರದಾಳ: ಸ್ವಾತಂತ್ರ್ಯ ಸಿಕ್ಕು ನಮಗೆ ಸುಮಾರು ಎಪ್ಪತ್ತನಾಲ್ಕು ವರ್ಷವಾಯಿತು ಈಗಾಗಲೆ ಸಾಕಷ್ಟು ಬದಲಾವಣೆ ಆಗಬೇಕಾಗಿತ್ತು ಈಗಲೂ ಸಾಕಷ್ಟು ಬಡವರು ಗುಡಿಸಲಲ್ಲೇ ಜೀವನ ನಡೆಸುತ್ತಿದ್ದಾರೆ, ನೀರಿಕ್ಷೆಯಷ್ಟು ಬದಲಾವಣೆ ಅಗದಿರುವುದು ತುಂಬಾ ಖೇದಕರ ಸಂಗತಿ. ಸ್ವಾತಂತ್ರ್ಯಕ್ಕಿಂತ ಪೂರ್ವದಲ್ಲಿ ಜಾತಿ, ಮತ, ಧರ್ಮ, ಪ್ರಾಂತ್ಯಗಳಿಗಾಗಿ ಬಡಿದಾಡುತ್ತಿರುವಾಗ, ವ್ಯಾಪಾರಕ್ಕಾಗಿ ಬಂದ ಬ್ರಿಟೀಶರು ಇದರ ಲಾಭ ಪಡೆದು ನಮ್ಮನಮ್ಮಲ್ಲೇ ಜಗಳ ಹಚ್ಚಿ, ಇಡಿ ದೇಶವನ್ನೇ ವ್ಯಾಪಿಸಿ ನಮ್ಮನ್ನಾಳತೊಡಗಿದರು.ನೂರಾರು ವರ್ಷ ಆಳಿದರು.ಕೊನೆಗೆ ದೇಶದಲ್ಲಿ ಸ್ವಾತಂತ್ರದ ಕಿಡಿ ಹೊತ್ತಿತು.ಸಾಕಷ್ಟು ಹೋರಾಟಗಳು ನಿರಂತರವಾಗಿ ನಡೆದವು. ದೇಶದಲ್ಲಿ ಸಾಕಷ್ಟು ದೇಶಾಭಿಮಾನಿಗಳು ಜಾತಿ, ಮತ, ಭೇದ ಮರೆತು ಎಲ್ಲರೂ ಒಕ್ಕೂರುಲಿನಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು.ಎಷ್ಟೋ ಹೊರಾಟಗಾರರು ತಮ್ಮ ಜೀವವನ್ನೇ ತ್ಯಾಗ ಮಾಡಿದರು ಒಬ್ಬರಲ್ಲ ಇಬ್ಬರಲ್ಲ ಲೆಕ್ಕವಿಲ್ಲದಷ್ಟು ಧೇಶಾಭಿಮಾನಿಗಳು ತಮ್ಮನ್ನು ಈ ದೇಶಸೇವೆಗೆ ಆತ್ಮಸಮರ್ಪಣೆ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ಪುಕ್ಸಟ್ಟೆಯಾಗಿ ಸಿಕ್ಕಿಲ್ಲ ಅದರಲ್ಲಿ ಲಕ್ಷಗಟ್ಟಲೇ ದೇಶಾಭಿಮಾನಿಗಳ ತ್ಯಾಗವಿದೆ,ಬಲಿದಾನವಿದೆ. ಹೀಗಾಗಿ ಅವರ ತ್ಯಾಗದ ಫಲವಾಗಿ ಇಂದು ನಾವೆಲ್ಲ ಸ್ವತಂತ್ರರಾಗಿ ಗೌರವಾದರಿಂದ ಬಾಳುತ್ತಿದ್ದೇವೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ಹೇಳಿದರು ತೇರದಾಳ ಪಟ್ಟಣದ ಮಹಾತ್ಮಾಗಾಂಧಿ ಕ್ರಿಡಾಂಗಣದಲ್ಲಿ 74 ನೇ ದಿನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು ಇಷ್ಟೆಲ್ಲ ಗೊತ್ತಿದ್ದರೂ ಈಗಲೂ ನಮ್ಮ ಜನ ಜಾತಿಗಾಗಿ, ಧರ್ಮಕ್ಕಾಗಿ,ನೀರಿಗಾಗಿ,ಭೂಮಿಗಾಗಿ,ಗಡಿಗಾಗಿ ಬಡಿದಾಡುತ್ತಿರುವುದನ್ನು ನೋಡಿತ್ತಿದ್ದೇವೆ. ಇದು ತುಂಬಾ ಗಂಭೀರ ವಿಷಯ ಇದು ಹೀಗೆಯೇ ಮುಂದುವರೆದರೇ ಎಲ್ಲಿ ನಾವು ಪುನಃ ಮೊದಲಿನ ಹಾಗೆ ಗುಲಾಮಗಿರಿಗೇ ಹೋಗುತ್ತಿದ್ದೇವೆನೋ ಎಂಬ ಆತಂಕವಿದೆ. ಕಾರಣ ನಾವೆಲ್ಲ ಅವುಗಳನ್ನು ಮೀರಿ ದೇಶಾಭಿಮಾನ ಬೆಳಿಸಿಕೊಳ್ಳಬೇಕಾಗಿದೆ, ಮೋದಲು ದೇಶ ಆನಂತರ ಎಲ್ಲ. ದೇಶದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ. ಇಂದಿನ ಈ ದಿನ ನಮಗೆಲ್ಲರಿಗೂ ಪವಿತ್ರವಾದ ದಿನ ಈ ದಿನವನ್ನು ನಾವೆಲ್ಲ ಪ್ರತಿವರ್ಷ ಬಹಳ ವಿಜೃಂಭನೆಯಿಂದ ಆಚರಿಸುತ್ತದ್ದೇವು. ಆದರೆ ಈ ವರ್ಷ ಕೊರೋನಾ ಕಾರಣದಿಂದ ಅನಿವಾರ್ಯವಾಗಿ ಸರಳರೀತಿಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿ ಆಚರಿಸುವ ಅನಿವಾರ್ಯವಿದೆ. ಕೊರೋನಾ ಮಹಾಮಾರಿಯು ಇಡಿ ಜಗತ್ತಿಗೆ ವ್ಯಾಪಿಸಿದೆ, ಇದರಿಂದ ನಮ್ಮ ಜನ ಸಾಕಷ್ಟು ನೋವು ಅನುಭವಿಸಿದರು.ಆದರೂ ಯಾರು ಹೆದರುವ ಅವಶ್ಯಕತೆ ಇಲ್ಲ.ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡರೆ ಸಾಕು ಈ ರೋಗವನ್ನು ತಡೆಗಟ್ಟಬಹುದು.ಈ ಕೊರೋನಾ ಕುರಿತು ಖ್ಯಾತ ಉದ್ಯಮಿ ಟಾಟಾ ಅವರು ಮೊದಲು ನಿಮ್ಮ ಜೀವ ಮುಖ್ಯ ಎಂದಿದ್ದಾರೆ.ಸರಕಾರ ಈ ಕೊರೋನಾ ನಿಯಂತ್ರಣಕ್ಕಾಗಿ ಸಾಕಷ್ಟು ವಿಜ್ಞಾನಿಗಳ ಹಾಗೂ ಪರಿಣಿತರ ಸಹಾಯ ತಗೆದುಕೊಂಡು ಈ ನಿಯಮಗಳನ್ನು ನೀಡಿದೆ.ಕಾರಣ ಜನಸಾಂದ್ರತೆಗೆ ನಿಷೇಧವಿದೆ.ಹೀಗಾಗಿ ಈಗ ಈ ಕೊರೋನಾ ವಿರುದ್ಧ ನಾವೆಲ್ಲ ಸರಕಾರದ ನಿಯಮ ಪಾಲಿಸುವುದರೊಂದಿಗೆ ಹೋರಾಟ ಮಾಡೋಣ ಎಂದು ಹೇಳಿದರು.            

  ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ ಗಳಾದ ಆಶಾ ಕಾರ್ಯಕರ್ತೆಯರಿಗೆ, ಕಂದಾಯ ಇಲಾಖೆ,ಪೋಲಿಸ್ ಇಲಾಖೆ,ಪುರಸಭೆ ಇಲಾಖೆ ಹಾಗೂ ಕೊರೋನಾ ಸಮಯದಲ್ಲೂ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದೈರುಗಳಿಗೂ ಹಾಗೂ ಯೋಧರಿಗೆ ಮತ್ತು ಇತ್ತೀಚೆಗೆ ಮೃತರಾದ ಮಾಜಿ ಯೋಧರಾದ ಸುರೇಶ ತಳವಾರ ಇವರು ಮಾಡಿದ ಕಾರ್ಯ ಶ್ಲಾಘಿಸಿ ಅವರ ಪತ್ನಿಯವರಿಗೂ ಸಹ ಸನ್ಮಾನಿಸಿ ಗೌರವಿಸಲಾಯಿತು. 

 ಜಾಹೀರಾತುದಾರರು : ಗಂಗೋತ್ರಿ ನರ್ಸರಿ .ಬೆಳಗಾವಿ ರೋಡ ಚಿಕ್ಕೋಡಿ . ಮಾಲೀಕರು - ಕಲ್ಮೇಶ ಶೇಡಬಾಳ . ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ,ಹಾಗೂ ಸುಪ್ರಸಿದ್ದ ಉತ್ಕಷ್ಟವಾದ ಗಾರ್ಡನ್ ತಯಾರಕರು .ಸಂಪರ್ಕಿಸಿ : ೯೪೮೨೯೧೯೯೮೩... ೯೫೩೫೭೧೯೦೫೩...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515 ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175 ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540









ಜಾಹೀರಾತು ....