ಶಾಸಕರಿಂದ ಕೊರೊನಾ ವಾರಿಯರ್ಸಗಳಿಗೆ ಅಭಿನಂದನಾ ಪತ್ರ
ದೇಶದಲ್ಲಿ ಕರೊನಾ ವೈರಸ್ದಿಂದ ಇಡಿ ಮಾನವ ಕುಲ ತತ್ತರಿಸಿಹೋಗಿದೆ. ಸರ್ಕಾರವು ದೇಶದಲ್ಲಿನ ಪ್ರಜೆಗಳ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಲಿದೆ.ಹೀಗಾಗಿ ಈ ಒಂದು ಕೆಲಸ ಕಾರ್ಯಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಅತಿ ಮುಂಚೂಣಿಯಲ್ಲಿ ನಿಂತು ಕೆಲಸ ನಿರ್ವಹಿಸಿದವರೆಂದರೆ ಆರೋಗ್ಯ ಇಲಾಖೆಯವರು,ಪೋಲಿಸ ಇಲಾಖೆ,ಪುರಸಭೆ ಇಲಾಖೆ,ಕಂದಾಯ ಇಲಾಖೆಯವರು ನಿರ್ವಸಿದಂತಹ ಜವಾಬ್ದಾರಿಯುತ ಕೆಲಸ ಕಾರ್ಯಗಳಿಂದ ಇಂದು ನಮ್ಮಲ್ಲಿ ಯಾವುದೇ ರೀತಿಯ ಕೊರೊನಾ ಆತಂಕವಿಲ್ಲದಂತಾಗಿದೆ.ಈ ಇಲಾಖೆಯವರು ತೋರಿದ ಕರ್ತವ್ಯ ನಿಷ್ಠೆ, ಧೈರ್ಯ,ಧೃಡನಿರ್ದಾರಗಳಿಂದಲೇ ಇಂದು ನಾವೆಲ್ಲ ಇವತ್ತಿನವರೆಗೂ ಕೊರೊನಾ ವೈರಸದಿಂದ ಮುಕ್ತರಾಗಿ ಜೀವನ ನಡೆಸುತ್ತಿದ್ದೇವೆ. ನಮ್ಮ ರಕ್ಷಣೆಗಾಗಿ ಹಗಲಿರುಳು ಸೇವೆ ಮಾಡಿದ ಈ ಎಲ್ಲ ಇಲಾಖೆಯವರಿಗೆ ನಾವು ಎಷ್ಟು ಕೃತಜÐತೆ ಸಲ್ಲಿಸಿದರು ಕಡಿಮೆ ಎಂದು ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹೇಳಿದರು.ಅವರು ತಮ್ಮ ಮತಕ್ಷೇತ್ರವು ಸುಭಿಕ್ಷೆಯಿಂದ ಇರಲು ಕಾರಣರಾದ ಈ ಮೇಲಿನ ಎಲ್ಲ ಇಲಾಖೆಯ ಅಧಿಕಾರಿ ವರ್ಗಕ್ಕೆ ಅವರ ಸೇವೆಯನ್ನು ಮೆಚ್ಚಿ ಮತಕ್ಷೇತ್ರದ ಜನತೆಯ ಪರವಾಗಿ ಅಭಿನಂದನಾ
ಪ್ರಮಾಣಪತ್ರವನ್ನು ನೀಡಿದ್ದಾರೆ.
Social Plugin