ದೇಹದಾನಕ್ಕೂ ಕೊರೊನಾ ಕಾಟ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಮೇ26: ಕೊರೊನಾ ಕೋವಿಡ್-19 ವೈರಸ್ ಜೀವಂತವಿದ್ದರನ್ನು ಕಾಡುತ್ತಿರುವದು ಸಾಮಾನ್ಯ. ವಯೋಸಹಜದಲ್ಲಿ ಮೃತರಾಗಿ ದೇಹದಾನ ನೀಡುವವರನ್ನೂ ಕಾಡುತ್ತಿರುವದರಿಂದ ಸತ್ತ ನಂತರವೂ ನಡೆಯಬೇಕಾದ ಸಾಮಾಜಿಕ ಪುಣ್ಯದ ಕಾರ್ಯಕ್ಕೂ ಅಡ್ಡಿಯಾಗಿರುವದು ವಿಪರ್ಯಾಸ.
ಬನಹಟ್ಟಿಯ ವೃದ್ಧೆ ಶಾಂತವ್ವ ಗಂಗಯ್ಯ ಕಾಡದೇವರ(82) ಮಂಗಳವಾರ ನಿಧನರಾಗಿದ್ದರು. ಇವರು ಕಳೆದ 15 ವರ್ಷಗಳ ಹಿಂದೆಯೇ ಬೆಳಗಾವಿಯ ಡಾ. ರಾಮಣ್ಣವರ ಮೆಮೋರೆಬಲ್ ಚಾರಿಟೆಬಲ್ ಟ್ರಸ್ಟ್ಗೆ ದೇಹದಾನ ಮಾಡುವಲ್ಲಿ ಸಹಿ ಹಾಕಿದ್ದರು. ಇದೀಗ ಕೊರೊನಾ ಅಟ್ಟಹಾಸದ ಕಾರಣ ಲಾಕ್ಡೌನ್ ಸಂದರ್ಭ ಸಾಮಾಜಿಕ ಅಂತರ ಹಾಗು ನಿಧನರಾದ ಪ್ರದೇಶದಲ್ಲಿಯೇ ಅಂತ್ಯ ಸಂಸ್ಕಾರದ ನಿಮಿತ್ತ ದೇಹದಾನ ಮಾಡಲು ಸಾಧ್ಯವಾಗಲಿಲ್ಲ.
`ಲಾಕ್ಡೌನ್ ಸಂದರ್ಭ ಸರಿಯಾದ ಮಾರ್ಗಸೂಚಿಯಿಲ್ಲದ ಕಾರಣ ದೇಹದಾನ ಸ್ವೀಕಾರಕ್ಕೆ ಪರೀಕ್ಷಾರ್ಥಿ ವೈದ್ಯರಿಗೆ ಸಮಸ್ಯೆ ಎದುರಾಗಬಾರದೆಂಬ ಉದ್ದೇಶದಿಂದ ಕೊರೊನಾ ಲಾಕ್ಡೌನ್ ದಿನಗಳಲ್ಲಿ 30 ಕ್ಕೂ ಅಧಿಕ ದೇಹದಾನಿಗಳ ದೇಹ ಸ್ವೀಕಾರ ಮಾಡದೆ ಆಯಾ ಪ್ರದೇಶಗಳಲ್ಲಿಯೇ ಅಂತ್ಯಸಂಸ್ಕಾರ ನಡೆಸುವಲ್ಲಿ ಕಾರಣವಾಗಿದೆ. ಜೂ.1 ರಿಂದ ದೇಹದಾನಿಗಳ ಆಸೆಯಂತೆ ಮತ್ತೇ ಟ್ರಸ್ಟ್ ವತಿಯಿಂದ ಸಮಾಜ ಸೇವೆಗೆ ಬದ್ಧವಾಗಲಿದೆ. ---ಡಾ. ಮಹಾಂತೇಶ ರಾಮಣ್ಣವರ, ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್, ಬೆಳಗಾವಿ.
- FOR ADVERTISMENT CONTACT : SWARUPA SANDARSHAN :9902523698

Social Plugin