ಶ್ರೀಕೃಷ್ಣ ಪ್ರೊಡಕ್ಷನ್ಸ್" ಬ್ಯಾನರ್ ಅಡಿಯಲ್ಲಿ ಆದರ್ಶ ಅಯ್ಯಂಗಾರ್ ನಿರ್ಮಾಣದಲ್ಲಿ ರಕ್ಷಿತ್ ತೀರ್ಥಹಳ್ಳಿ ರವರ "ಕಾಡಿನ ನೆಂಟರು" ಪುಸ್ತಕ ಆಧರಿಸಿ ತಯಾರಾದ "ತಿಮ್ಮನ ಮೊಟ್ಟೆಗಳು" ಚಿತ್ರ "ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ"ದಲ್ಲಿ ಆಯ್ಕೆಯಾಗಿದ್ದು ಡಿಸೆಂಬರ್ 7 ರಂದು ಕೋಲ್ಕತ್ತಾದಲ್ಲಿ ಪ್ರದರ್ಶನಗೊಳ್ಳಲಿದೆ. ಪರಿಸರ ಮತ್ತು ಮಾನವ ಸಂಭಂದಗಳ ಸುತ್ತ ಹೆಣೆಯಲಾಗಿರುವ ಕಥೆಯಲ್ಲಿ ಕಾಳಿಂಗ ಹಾವಿನ ಕೆಲವು ವಿಷಯಗಳು ಚಿತ್ರದ ಜೀವಾಳವಾಗಿದೆ.
ಸುಚೇಂದ್ರ ಪ್ರಸಾದ್, ಕೇಶವ್ ಗುತ್ತಳಿಕೆ, ಶೃಂಗೇರಿ ರಾಮಣ್ಣ, ಆಶಿಕಾ ಸೋಮಶೇಖರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಿ ಎಸ್ ಕೆಂಪರಾಜು ಸಂಕಲನ, ಹೇಮಂತ್ ಜೋಯಿಸ್ ಸಂಗೀತ, ಪ್ರವೀಣ್ ಎಸ್ ಛಾಯಾಗ್ರಾಹಣ ಚಿತ್ರಕ್ಕಿದೆ.
Social Plugin