ಕನ್ನಡದ ಸಿನಿಪ್ರೇಮಿಗಳಿಗೆ ಸ್ಯಾಂಡಲ್ವುಡ್ ನಷ್ಟೇ ಕೋಸ್ಟಲ್ವುಡ್ ಕೂಡ ಪರಿಚಯವಾಗಿರುತ್ತದೆ. ತುಳು ಚಿತ್ರರಂಗದ ಹಲವು ಉತ್ತಮ ಸಿನಿಮಾಗಳು ನಮ್ಮ ಇಡೀ ನಾಡಿಗೆ ತಲುಪಿವೆ. ಅಲ್ಲಿನ ಅದೆಷ್ಟೋ ಉತ್ತಮ ಕಲಾವಿದರು, ತುಳು ಜೊತೆಗೆ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಾ, ಕನ್ನಡಿಗರ ಮನ ಗೆದ್ದಿದ್ದಾರೆ, ಗೆಲ್ಲುತ್ತಲೇ ಇದ್ದಾರೆ ಕೂಡ. ಇದಕ್ಕೆಲ್ಲ ಕಾರಣ ತುಳು ಚಿತ್ರರಂಗದಿಂದ ಬರುವಂತಹ ಮನರಂಜನಾತ್ಮಕ ಹಾಗು ಪ್ರಭುದ್ಧ ಸಿನಿಮಾಗಳು ಎಂದರೆ ತಪ್ಪಾಗದು. ಸದ್ಯ ಈ ತುಳು ಚಿತ್ರರಂಗದಿಂದ ಘೋಷಣೆಯಾದ ಮತ್ತೊಂದು ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಅದುವೇ ‘Mr. ಮದಿಮಯೆ"ಅಕ್ಟೋಬರ್ ನಲ್ಲಿ Mr ಮದಿಮೆಯೆ ತೆರೆಗೆ*
*75 ಫೀಟ್ ನ‌ ಪೋಸ್ಟರ್ ಬಿಡುಗಡೆ*
ಮಂಗಳೂರು: ಎಮ್ ಎಮ್ ಎಮ್ ಗ್ರೂಪ್ಸ್ ಬ್ಯಾನರ್ ನ ಡಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾ ‘Mr. ಮದಿಮಯೆ’ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡು ಸೆನ್ಸಾರ್ ಹಂತಕ್ಕೆ ತಲುಪಿದೆ. ಸಿನಿಮಾ ಅಕ್ಟೋಬರ್ ನಲ್ಲಿ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.
ಸಿನಿಮಾಕ್ಕೆ ಒಂದೇ ಹಂತದಲ್ಲಿ ಸುಮಾರು 20 ದಿನಗಳ ಕಾಲ ಚಿತ್ರೀಕರಣ ನಡೆದಿದೆ.
ಇಲ್ಲಿ ಮುಖ್ಯವಾಗಿ ಸಿನಿಮಾದಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಪ್ರತಿಭಾವಂತರ ತಂಡ ಇಲ್ಲಿ ಸೇರಿಕೊಂಡು ಕೆಲಸ ಮಾಡಿದೆ. ಸಾಯಿಕೃಷ್ಣ ಕುಡ್ಲರಂತಹ ಪ್ರಬುದ್ದ ಕಲಾವಿದರೊಂದಿಗೆ ಹೊಸ ಹುಡುಗರು ಇಲ್ಲಿ ಹೆಜ್ಜೆಹಾಕಿದ್ದಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ಒರೆಗೆ ಹಚ್ಚಿದ್ದಾರೆ. ಹೀಗಾಗಿ ಹೊಸ ಕಲಾವಿದರ ಹುರುಪು ತಮ್ಮ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕಾತರವೂ ಇದೆ. ಈ ಚಿತ್ರದ ಶೀರ್ಷಿಕೆ ಘೋಷಣೆಗಾಗಿ ತಂಡದವರು ವಿಭಿನ್ನವಾದ ವಿಡಿಯೋ ಒಂದನ್ನು ಕೂಡ ಹೊರಬಿಟ್ಟಿದ್ದರು. ನವೀನ್ ಜಿ ಪಿ ಅವರ ನಿರ್ದೇಶನದ ಈ ಸಿನಿಮಾದ ನಾಯಕನಾಗಿ ಸಾಯಿ ಕೃಷ್ಣ ಕುಡ್ಲ ಅವರು ನಟಿಸುತ್ತಿದ್ದು, ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಶ್ವೇತಾ ಸುವರ್ಣ, ರವಿಕಾಂತ್ ಪೂಜಾರಿ, ನೆಲ್ಲಿಗುಡ್ಡೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪಿಂಕಿ ರಾಣಿ, ರವಿ ರಾಮಕುಂಜ ಕಾಮಿಡಿ ಗ್ಯಾಂಗ್ ಖ್ಯಾತಿಯ ಮನೀಷ್ ಶೆಟ್ಟಿ ಉಪ್ಪಿರ, ಅಕ್ಷಯ್ ಸರಿಪಲ್ಲ ಜ್ಯೋತಿಷ್ ಶೆಟ್ಟಿ, ಶರಣ್ ಕೈಕಂಬ, ಸವ್ಯರಾಜ್ ಪ್ರಥ್ವಿನ್ ಕುಂದರ್ ಪೊಳಲಿ, ಉತ್ಸವ್ ವಾಮಂಜೂರು ಮುಂತಾದವರು ಬಣ್ಣ ಹಚ್ಚಿದ್ದಾರೆ.
ಪೋಸ್ಟರ್ ಬಿಡುಗಡೆ
ತುಳು ಸಿನಿಮಾರಂಗದ ಇತಿಹಾಸದಲ್ಲೆ 75 ಫಿಟ್ ನ ಫಸ್ಟ್ ಲುಕ್ ಪೋಸ್ಟರ್ ಆಗಸ್ಟ್ 5 ರಂದು ಬಿಡುಗಡೆಯಾಯಿತು. ಚಿತ್ರರಂಗದ ಖ್ಯಾತ ಕಲಾವಿದರು, ನಿರ್ದೇಶಕರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. 
ಮಿಥುನ್ ಕೆ ಎಸ್ ನಿರ್ಮಾಣದ ಹಾಗು ರಾಜೇಶ್ ಫೇರವೋ ಅವರ ಸಹನಿರ್ಮಾಣದ ಈ ‘Mr. ಮದಿಮಯೆ’ ಸಿನಿಮಾಗೆ ಕೆ ಪಿ ಮಿಲನ್ ಸಂಗೀತ ಹಾಗು ಪ್ರಶಾಂತ್ ಧರ್ಮಸ್ಥಳ ಅವರ ಛಾಯಾಗ್ರಹಣ ಇದೆ. ನವೀನ್ ಆರ್ಯನ್ ಮತ್ತು ವಿನೋದ್ ನೃತ್ಯ ಸಂಯೋಜಿಸಿದ್ದಾರೆ. ಕೌರವ್ ವೆಂಕಟೇಶ್ ರವರ ಸಾಹಸ ಸುಕೇಶ್ ಶೆಟ್ಟಿ ಜಿ.ಎಸ್ ಗುರುಪುರ ಅವರ ಸಾಹಿತ್ಯ, ಸುಜೀತ್ ರವರ ಸಂಕಲನ ಇದೆ‌. ವಸ್ತ್ರಾಲಂಕಾರ ನಿಖಿತಾ ಕೋಟ್ಯಾನ್, ನಿರ್ಮಾಣ ನಿರ್ವಾಹಕ : ಶ್ರೇಯಸ್ ಶೆಟ್ಟಿ, ಚಿತ್ರ ಮೇಲ್ವಿಚಾರಕ: ಹೆರಾಲ್ಡ್ ವಾಲ್ಡರ್, ಸೌಮ್ಯ ಚೇತನ್, ಸೌಜನ್ಯ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಸಮಾರಂಭದ ಸುತ್ತ ನಡೆಯುವ ಕತೆಗೆ ಹಾಸ್ಯದ ಹಚ್ಚಲಾಗಿದೆ. ಜೊತೆಗೆ ಸೆಂಟಿಮೆಂಟ್ ಎಲ್ಲವೂ ಇದೆ. ಪ್ರೇಕ್ಷಕರ ಅಭಿರುಚಿಯನ್ನು ಅರಿತು ಸಿನಿಮಾದ ಕತೆ ಹೆಣೆಯಲಾಗಿದೆ. ಕ್ಲೈಮಾಕ್ಸ್ ವಿಭಿನ್ನತೆಯಿಂದ ಹೊಂದಿದ್ದು, ಸಿನಿಮಾ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಒದಗಿಸುತ್ತದೆ ಎಂದು ಸಿನಿಮಾದ ನಿರ್ದೇಶಕ ನವೀನ್ ಪೂಜಾರಿ ತಿಳಿಸಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.