ಮುಂದವರೆದ "ರಾನಿ" ಚಿತ್ರದ ನಾಯಕ ಕಿರಣ್ ರಾಜ್ ಸಾಮಾಜಿಕ ಕಾರ್ಯಜನಪ್ರಿಯ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ಕಿರಣ್ ರಾಜ್, ಈಗ ಬೆಳ್ಳಿತೆರೆಯಲ್ಲೂ ಬೇಡಿಕೆಯ ನಟ. ಪ್ರಸ್ತುತ ಅವರು ನಾಯಕನಾಗಿ ನಟಿಸುತ್ತಿರುವ "ರಾನಿ" ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. 
ಕಿರಣ್ ರಾಜ್ ಕೇವಲ ನಾಯಕನಾಗಷ್ಟೇ ಅಲ್ಲ. ಸಾಮಾಜಿಕ ಕಾರ್ಯಗಳಿಂದಲೂ ಗುರುತಿಸಿಕೊಂಡಿರುವವರು. ಕೋವಿಡ್ ಸಮಯದಲ್ಲೂ ಸಾಕಷ್ಟು ಜನರಿಗೆ ಕಿರಣ್ ರಾಜ್ ಆಸರೆಯಾಗಿದ್ದರು. ಪ್ರಸ್ತುತ ನಕ್ಷತ್ರ ಅವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ "ನಮ್ಮನೆ ಸುಮ್ಮನೆ ನಿರಾಶ್ರಿತರ ಆಶ್ರಮ" ಕ್ಕೆ ಕಿರಣ್ ರಾಜ್ ನೂರು ಮೂಟ್ಟೆ ಸಿಮೆಂಟ್ ನೀಡಿದ್ದಾರೆ. ಕಿರಣ್ ರಾಜ್ ಅವರ ಈ ಕಾರ್ಯಕ್ಕೆ ನಕ್ಷತ್ರ ಧನ್ಯವಾದ ತಿಳಿಸಿದ್ದಾರೆ.