ಕತಾರ್ ನಲ್ಲಿ ವಿಕ್ರಂ ಸೂರಿ & ನಮಿತಾ ರಾವ್ ರವರಿಗೆ ಸನ್ಮಾನ
ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ನೀರಂತರವಾಗಿ ಕತಾರ್ ನಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸುವ ಕಾರ್ಯದಲ್ಲಿ ಸದಾ ತನನ್ನು ತೊಡಗಿಸಿಕೊಂಡ ಅನಿವಾಸಿ ಭಾರತೀಯರ ಹೆಮ್ಮೆಯ ಸಂಸ್ಥೆ. ಭಾರತೀಯ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ "ಬುಧುವಾರ ಉತ್ಸವ " ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಖ್ಯಾತ ಚಲನಚಿತ್ರ, ಕಿರುತೆರೆ ನಟ-ನಟಿಯರು ಮತ್ತು ಹೆಸರಾಂತ ನೃತ್ಯ ಕಲಾವಿದರೂ ಆದ ಶ್ರೀ ವಿಕ್ರಮ ಸೂರಿ ಮತ್ತು ನಮಿತಾ ರಾವ್ ದಂಪತಿಗಳು ಸ್ಥಳೀಯ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣ ದಲ್ಲಿ ನೃತ್ಯ ಕಾರ್ಯಕ್ರಮ ಪ್ರಸ್ತುತಿಪಡಿಸಿದರು, ಈ ದಂಪತಿಗಳು ನೀಡಿದ ಅಮೋಘ ಪ್ರದರ್ಶನ ನೆರಿದಿದ್ದ ಎಲ್ಲ ಕಲಭಿಮಾನಿಗಳ ಹೃದಯ ಗೆದ್ದಿತು. ಕಾರ್ಯಕ್ರಮದ ಕೊನೆಯಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಶ್ರೀ ಮಣಿಕಂಠ ಮತ್ತು ಉಪಾಧ್ಯಕ್ಷರಾದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಮತ್ತು ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾದ ಶ್ರೀ ಮಹೇಶ್ ಗೌಡ ವರು ಕಲಾ ದಂಪತಿಗಳಾದ ಶ್ರೀ ವಿಕ್ರಮ್ ಸೂರಿ ಮತ್ತು ನಮಿತಾ ರಾವ್ ಅವರನ್ನು ಕತಾರ್ ನಲ್ಲಿರುವ ಸಮಸ್ತ ಭಾರತೀಯರ ಪರವಾಗಿ ಸನ್ಮಾನಿಸಲಾಯಿತು.

Social Plugin