ತೇರದಾಳ : ರಾಜ್ಯದಲ್ಲಿ ಕೊರೊನಾ ವೈರಾಣು ತನ್ನ ಕಬಂಧ ಬಾಹುವನ್ನು ಎಲ್ಲೆಡೆ ಚಾಚಿ ಹಲವಾರು ಜನರನ್ನು ಬಲಿ ತಗೆದುಕೊಳ್ಳುತ್ತಿರುವುದರಿಂದ ರಾಜ್ಯ ಸರಕಾರ ಲಾಕ್ಡೌನ್ ನಿಯಮಾವಳಿಗಳನ್ನು ಬದಲಾಯಿಸುತ್ತಿದ್ದಂತೆ ಪಟ್ಟಣದ ಜನತೆ ಬೆಳಿಗ್ಗೆಯಿಂದಲೇ ಕೋವಿಡ್ ನಿಯಮಾವಳಿಗಳನ್ನು ಮರೆತು ತರಕಾರಿ ಖರೀದಿ ಮಾಡಲು ಮುಗಿ ಬಿದ್ದಿರುವುದು ಕಂಡು ಪಟ್ಟಣದ ಜನತೆಯಲ್ಲಿ ಆತಂಕ ಮೂಡಿಸಿದೆ. ಕೊರೊನಾ ಸೋಂಕಿನ ಅಬ್ಬರದ ನಿಯಂತ್ರಣ ಸಲುವಾಗಿ ಸರಕಾರ ರಾಜ್ಯದಲ್ಲಿ ಲಾಕ್ಡೌನ್ ಹೇರಿಕೆಯನ್ನು ಮೇ.10 ರಿಂದ 24ರ ವರೆಗೆ ಕಟ್ಟು ನಿಟ್ಟಿನ ಕ್ರಮ ಜಾರಿ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ ಜನರು ತಮ್ಮೆಲ್ಲ ಮನೆಗೆಲಸಗಳನ್ನು ಬಿಟ್ಟು ಮಾರ್ಕೆಟ್ಗೆ ಬಂದು ಸಾಮಾಜಿಕ ಅಂತರ ಮರೆತು, ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ತರಕಾರಿ ಖರೀದಿ ಮಾಡುವುದರಲ್ಲಿ ಮಗ್ನರಾಗಿದ್ದರು. ಜನರಲ್ಲಿ ಇನ್ನು 15ದಿನಗಳ ಕಾಲ ಪಟ್ಟಣದಲ್ಲಿ ಅಗತ್ಯ ವಸ್ತುಗಳು ಸಿಗುವುದಿಲ್ಲವೆಂದು ತಿಳಿದು ಬಜಾರದಲ್ಲಿ ಇಂದು ಬೆಳಿಗ್ಗೆಯಿಂದಲೇ ಜನಜಂಗುಳಿ ಸೇರಿತು.
ಸೋಮವಾರದಿಂದ 14ದಿನಗಳ ಕಾಲ ಬೆಳಿಗ್ಗೆ 6ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸರಕಾರ ಅವಕಾಶ ನೀಡಿದೆ ಅದಕ್ಕೆ ಜನರು ಹೆದರುವಂತಿಲ್ಲ. ಕೊರೊನಾ ವೈರಾಣುವಿನ ಅರ್ಭಟವನ್ನು ತಡೆಯಲು ಸರಕಾರ ಈ ರೀತಿಯಾದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಇದು ನಮ್ಮ ಹಿತಕ್ಕಾಗಿ. ಎಲ್ಲರೂ ಆ ನಿಯಮಗಳನ್ನು ಪಾಲಿಸಲೇ ಬೇಕು. ಬೆಳಿಗ್ಗೆ6ಗಂಟೆಯಿಂದ ಬೆಳಿಗ್ಗೆ 10ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಿ ತಮ್ಮ ಮನೆಯಲ್ಲಿಯೇ ಇದ್ದು ಕೊರೊನಾ ಹರಡದಂತೆ ಸರಕಾರದ ನಿಯಮಗಳಿಗೆ ಸಹಕರಿಸಬೇಕು. ತರಕಾರಿಗಳು ತಮ್ಮ ಮನೆ ಬಾಗಿಲಿಗೆ ಬರುತ್ತವೆ. ಅಲ್ಲಿಯೇ ಖರೀದಿ ಮಾಡಬಹುದು. ಮನೆಯಿಂದ ಮಾತ್ರ ಹೊರಬರದೆ ಸರಕಾರ ಹಾಕಿರುವ ಜನತಾ ಕಪ್ರ್ಯೂಗೆ ಸಹಕರಿಸಿ. ಅನಾವಶ್ಯಕವಾಗಿ ಸಂಚರಿಸುವ ವಾಹನ ಸವಾರರಿಗೆ ದಂಡ ವಿಧಿಸಲಾಗುವುದು. ಜೊತೆಗೆ ವಾಹನ ಸೀಜ್ ಮಾಡಲಾಗುವುದು ಎಂದು ಪೋಲಿಸ್ ಇಲಾಖೆಯ ಆದೇಶವನ್ನು ಸಹ ನಾವು ತಿಳಿದು 14 ದಿನಗಳ ಕಾಲ ಅನಾವಶ್ಯಕ ವಾಹನವನ್ನು ರಸ್ತೆಗೆ ತರದೇ ಮನೆಯಲ್ಲಿಯೇ ಇದ್ದು ಸರಕಾರದ ನಿಯಮಗಳಿಗೆ ಸಹಕರಿಸಬೇಕಾಗಿದೆ. ಇದೆಲ್ಲ ನಮ್ಮ ಜೀವನ ಉಳಿಸುವುದಕೊಸ್ಕರ, ಜೀವ ಅತ್ಯಮೂಲ್ಯವಾದದು.
Social Plugin